ಕರ್ನಾಟಕ

karnataka

ETV Bharat / state

ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ರಮೇಶ್​ ಜಿಗಜಿಣಗಿ - ವಿಜಯಪುರ ಪ್ರಗತಿ ಪರಿಶೀಲನಾ ಸಭೆ

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಮಾಜ ಕಲ್ಯಾಣ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಪ್ರಗತಿ‌ ಪರಿಶೀಲನಾ ಸಭೆಯಲ್ಲಿ ಸಂಸದ ರಮೇಶ್​ ಜಿಗಜಿಣಗಿ, ಅಧಿಕಾರಿಗಳನ್ನು ತರಾಟೆಗೆ​ ತೆಗೆದುಕೊಂಡರು.

vijayapura-progress-review-meeting
ಸಂಸದ ರಮೇಶ್​ ಜಿಗಜಿಣಗಿ

By

Published : Jan 27, 2020, 3:13 PM IST

ವಿಜಯಪುರ: ಸಮಾಜ ಕಲ್ಯಾಣ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಪ್ರಗತಿ‌ ಪರಿಶೀಲನಾ ಸಭೆಯಲ್ಲಿ ಸಂಸದ ರಮೇಶ್​​ ಜಿಗಜಿಣಗಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳನ್ನು ಜಿಗಜಿಣಗಿ ತರಾಟೆ ತೆಗೆದುಕೊಂಡರು. ಬಿಸಿಎಂ ಹಾಸ್ಟಲ್ ಬಳಿ ಇರುವ ಮದ್ಯದ ಅಂಗಡಿ ಹಾಕಲು ಅನುಮತಿ ನೀಡಿದ್ದು ಯಾರು? ಅಧಿಕಾರಿಗಳೇ ವಿದ್ಯಾರ್ಥಿಗಳಿಗೆ ಮದ್ಯ ಕುಡಿಯಲೆಂದು ಸಹಾಯಕವಾಗುವಂತೆ ಮಾಡಿದ್ದಾರೆ ಎಂದು ಗರಂ ಆದರು.

ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಸಂಸದ ರಮೇಶ್​ ಜಿಗಜಿಣಗಿ

ಅವುಗಳನ್ನು ತೆರವುಗೊಳಿಸದಿದ್ದರೆ ಡಿಸಿ, ಎಸ್ಪಿ, ಸಮಾಜ‌ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಪಾಠ ಕಲಿಸುತ್ತೆನೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಗುಡುಗಿದರು.

ABOUT THE AUTHOR

...view details