ಕರ್ನಾಟಕ

karnataka

ಸತತ 3ನೇ ಬಾರಿ ಕಾಯಕಲ್ಪ ಪ್ರಶಸ್ತಿ ಪಡೆದ ವಿಜಯಪುರ ಜಿಲ್ಲಾಸ್ಪತ್ರೆ

ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೊಡುವ ಕಾಯಕಲ್ಪ ಪ್ರಶಸ್ತಿಯನ್ನು ಸತತ ಮೂರನೇ ಬಾರಿ ತನ್ನ ಮುಡಿಗೇರಿಸಿಕೊಂಡು ರಾಜ್ಯಕ್ಕೆ ಮಾದರಿಯಾಗಿದೆ.

By

Published : Oct 6, 2020, 11:01 PM IST

Published : Oct 6, 2020, 11:01 PM IST

Updated : Oct 7, 2020, 9:49 AM IST

Vijayapura
ವಿಜಯಪುರ ಜಿಲ್ಲಾಸ್ಪತ್ರೆ

ವಿಜಯಪುರ :ಸರ್ಕಾರಿ ಆಸ್ಪತ್ರೆ ಚಿಕಿತ್ಸೆ ಎಂದರೆ ಮೂಗುಮುರಿಯುವವರೇ ಹೆಚ್ಚು. ಅದೇ ಸರ್ಕಾರಿ ಆಸ್ಪತ್ರೆ ಇಂದು ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆಯಿಲ್ಲ ಎಂಬಂತೆ ಅಭಿವೃದ್ಧಿ ಪಥದಲ್ಲಿ ನಿಂತು, ಸತತ 3ನೇ‌ ಬಾರಿಯೂ ರಾಜ್ಯದ ಜನರೇ ಕೊಂಡಾಡುವಂತಾಗಿದೆ.

ಹೌದು ಬಡ ಜನರಿಗೆ ಅಷ್ಟೇ ಸರ್ಕಾರಿ ಆಸ್ಪತ್ರೆಗಳು ಅನ್ನುತ್ತಿದ್ದ ಸಾರ್ವಜನಿಕರಿಗೆ ವಿಜಯಪುರ ಜಿಲ್ಲಾಸ್ಪತ್ರೆ ಮಾದರಿಯಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೊಡುವ ಕಾಯಕಲ್ಪ ಪ್ರಶಸ್ತಿ ತನ್ನ ಮುಡಿಗೇರಿಸಿಕೊಂಡಿದೆ. ಸ್ವಚ್ಚತಾ ಕ್ರಮಕ್ಕೆ ಹೆಸರುವಾಸಿಯಾದ ಜಿಲ್ಲಾಸ್ಪತ್ರೆಗೆ, ನಿತ್ಯ ನೂರಾರು ರೋಗಿಗಳು ಚಿಕಿತ್ಸೆ ಪಡೆಯಲು ಬರ್ತಾರೆ. ಚಿಕಿತ್ಸೆ ಕ್ರಮ, ತ್ಯಾಜ್ಯ ವಿಲೇವಾರಿ, ಸರ್ಕಾರಿ ನಿರ್ದೇಶನಗಳ ಅನುಷ್ಠಾನ ಸೇರಿದಂತೆ ಹಲವು ಕ್ರಮಗಳಿಗೆ ಜಿಲ್ಲಾಸ್ಪತ್ರೆ ಸೈ ಎನಿಸಿಕೊಂಡಿದ್ದು, ನಾಲ್ಕನೇ ಬಾರಿಗೆ ಕಾಯಕಲ್ಪ ಪ್ರಶಸ್ತಿ ಪಡೆದುಕೊಂಡಿದೆ. ಇನ್ನು ಜಿಲ್ಲೆಯ ಜನರ ಸಹಕಾರ ಹಾಗೂ ಆಸ್ಪತ್ರೆ ಸಿಬ್ಬಂದಿಗಳ ಶ್ರಮ ಜಿಲ್ಲಾಸ್ಪತ್ರೆ ಈ ರಾಜ್ಯಕ್ಕೆ ಮಾದರಿಯಾಗಿದೆ.

ವಿಜಯಪುರ ಜಿಲ್ಲಾಸ್ಪತ್ರೆ 3 ನೇ ಬಾರಿ ಕಾಯಕಲ್ಪ ಪ್ರಶಸ್ತಿ ಪಡೆದು ಗಮನ ಸೆಳೆದಿದೆ.

ಇನ್ನು ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನೀಡುವ ಈ ಪ್ರಶಸ್ತಿ ಬಂದಿರೋದು ಇದೇ ಮೊದಲಲ್ಲ, ಕಳೆದ 2015-16 ಪ್ರಥಮ, 2016-17 ಪ್ರಥಮ ಸ್ಥಾನ, ಹಾಗೂ 2018-19 ರಲ್ಲಿ 3 ಸ್ಥಾನಕ್ಕೆ ಕಾಯಕಲ್ಪ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಅಲ್ಲದೇ ರಾಷ್ಟ್ರೀಯ ಗುಣಮಟ್ಟ ಭರವಸೆಯ ಸೇವಾ (NQAS) ಪ್ರಶಸ್ತಿ ಕೂಡ 2017-18 ರಲ್ಲಿ ವಿಜಯಪುರ ಜಿಲ್ಲಾಸ್ಪತ್ರೆ ಪಡೆದುಕೊಂಡಿತು. ಮತ್ತೆ ಈ ಸಾಲಿನಲ್ಲಿ ರಾಜ್ಯಕ್ಕೆ 2ನೇ ಸ್ಥಾನದ ಕಾಯಕಲ್ಪ ಅವಾರ್ಡ್ ಜಿಲ್ಲಾಸ್ಪತ್ರೆಗೆ ಬಂದಿರೋದು ಆಸ್ಪತ್ರೆ ವೈದ್ಯರ ಸಂತಸ ಇಮ್ಮಡಿಗೊಳಿಸಿದೆ.

ಒಟ್ಟು 250 ಜನ ಸಿಬ್ಬಂದಿ ಹಾಗೂ 426 ಹಾಸಿಗೆ ಹೊಂದಿರುವ ಜಿಲ್ಲಾಸ್ಪತ್ರೆಯಲ್ಲಿ 100 ಹಾಸಿಗೆಗಳ ಹೆರಿಗೆ ವಿಭಾಗವಿದ್ದು ಪ್ರತಿ ತಿಂಗಳು 1,200 ಹೆರಗೆಗಳಾಗಿದ್ದು ರಾಜ್ಯಕ್ಕೆ 2 ನೇ ಸ್ಥಾನದಲ್ಲಿದೆ. ಇನ್ನು ಈ ವರ್ಷದ ಎರಡನೇ ಸ್ಥಾನ ಕಾಯಕಲ್ಪ ಪ್ರಶಸ್ತಿ ವಿಜಯಪುರ ಹಾಗೂ ಶಿವಮೊಗ್ಗ ಜಿಲ್ಲಾಸ್ಪತ್ರೆಗಳು ಪಡೆದುಕೊಂಡಿದ್ದು, ಪ್ರಶಸ್ತಿಯ 2 ಸ್ಥಾನಕ್ಕೆ 20 ಲಕ್ಷ ನಗದು ಸರ್ಕಾರ ನೀಡುತ್ತದೆ.

ರಾಜ್ಯದ ಎರಡು ಆಸ್ಪತ್ರೆಗಳು ದ್ವೀತಿಯ ಸ್ಥಾನ ಪಡೆದುಕೊಂಡ ಕಾರಣ ತಲಾ 10 ಲಕ್ಷ ಹಣ ವಿಜಯಪುರ ಜಿಲ್ಲಾಸ್ಪತ್ರೆಗೆ ಬರ್ತಿದ್ದು ನಗದು ಹಣದ ಶೇ.25‌‌ ಹಣ ಆಸ್ಪತ್ರೆ ಸಿಬ್ಬಂದಿಗಳಿಗೆ ನೀಡಲಾಗುತ್ತದೆ. ಇನ್ನುಳಿದ ಶೇ.75 ಹಣ ಜಿಲ್ಲಾಸ್ಪತ್ರೆಯ ಅಭಿವೃದ್ಧಿ ಕಾರ್ಯಕ್ಕೆ ಬಳಸಲಾಗುತ್ತದೆಯಂತೆ. ಇತ್ತ ಈ ಬಾರಿಗೂ ಕಾಯಕಲ್ಪ ಪ್ರಶಸ್ತಿಗೆ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

ಒಟ್ಟಿನಲ್ಲಿ ನಾಲ್ಕನೇ ಬಾರಿಗೆ ವಿಜಯಪುರ ಜಿಲ್ಲಾಸ್ಪತ್ರೆಗೆ ಕಾಯಕಲ್ಪ ಪ್ರಶಸ್ತಿ ಬಂದಿರೋದು ಜಿಲ್ಲೆಯ ಜನರ ಸಂತಸ ಇಮ್ಮಡಿಗೊಳಿಸಿದ್ದು, ಜಿಲ್ಲಾಸ್ಪತ್ರೆ ಸಾಧನೆ ಇನ್ನು ಬೆಳೆಯಲಿ ಎನ್ನುವುದೇ ನಮ್ಮೆಲ್ಲರ ಆಶಯ.

Last Updated : Oct 7, 2020, 9:49 AM IST

ABOUT THE AUTHOR

...view details