ವಿಜಯಪುರ: ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ನೇಣಿಗೆ ಶರಣಾದ ಘಟನೆ ವಿಜಯಪುರ ನಗರದ ಇಬ್ರಾಹಿಂಪುರ ಬಡಾವಣೆ ಬಳಿ ನಡೆದಿದೆ.
ವಿಜಯಪುರ: ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಆತ್ಮಹತ್ಯೆ
ವ್ಯಕ್ತಿಯೊಬ್ಬ ನೇಣಿಗೆ ಶರಣಾದ ಘಟನೆ ವಿಜಯಪುರ ನಗರದ ಇಬ್ರಾಹಿಂಪುರ ಬಡಾವಣೆ ಬಳಿ ನಡೆದಿದೆ. ಲಕ್ಷ್ಮಣ ಕಾಂಬ್ಳೆ (42) ನೇಣಿಗೆ ಶರಣಾದ ವ್ಯಕ್ತಿ.
ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಆತ್ಮಹತ್ಯೆ
ಲಕ್ಷ್ಮಣ ಕಾಂಬ್ಳೆ (42) ನೇಣಿಗೆ ಶರಣಾದ ವ್ಯಕ್ತಿ. ಇತ ಇಬ್ರಾಹಿಂಪುರ ಮುಖ್ಯ ರಸ್ತೆಯ ಮೆಡಿಕಲ್ ಶಾಪ್ ಬಳಿ ನಿತ್ಯ ಮಲಗುತ್ತಿದ್ದ. ಅದರ ಪಕ್ಕದ ಮನೆ ಖಾಲಿ ಇತ್ತು. ಅದರ ಮಹಡಿ ಮೇಲೆ ಏರಿ ಹಗ್ಗದಿಂದ ಗ್ರಿಲ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅನಾರೋಗ್ಯದಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.