ಕರ್ನಾಟಕ

karnataka

By

Published : Jul 8, 2020, 7:03 PM IST

Updated : Jul 8, 2020, 7:36 PM IST

ETV Bharat / state

ಕ್ವಾರಂಟೈನ್​​ ಸೀಲ್ ಇದ್ದ ವ್ಯಕ್ತಿಯನ್ನು ಮಾನಸಿಕ ಅಸ್ವಸ್ಥನೆಂದು ತಪಾಸಣೆ ನಡೆಸಿಲ್ಲವಾ ಅಧಿಕಾರಿಗಳು?

ಮಹಾರಾಷ್ಟ್ರದಿಂದ ವಿಜಯಪುರಕ್ಕೆ ಬಂದಿದ್ದ ಕಾರ್ಮಿಕರ ಪೈಕಿ ವ್ಯಕ್ತಿಯೊಬ್ಬನನ್ನು ಮಾನಸಿಕ ಅಸ್ವಸ್ಥನೆಂದುಕೊಂಡು ಪರಿಶೀಲನೆ ನಡೆಸದೆ ರೈಲ್ವೆ ನಿಲ್ದಾಣದಲ್ಲೇ ಅಧಿಕಾರಿಗಳು ಬಿಟ್ಟು ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Health checkup
ಆರೋಗ್ಯ ತಪಾಸಣೆ

ವಿಜಯಪುರ:ಇಂದು ಬೆಳಗ್ಗೆ 7.30ರ ಸುಮಾರಿಗೆ ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದ 60ಕ್ಕೂ ಅಧಿಕ ಕಾರ್ಮಿಕರ ಪೈಕಿ ವ್ಯಕ್ತಿಯೊಬ್ಬನನ್ನು ಅಧಿಕಾರಿಗಳು ಪರಿಶೀಲನೆ ನಡೆಸದೆ ರೈಲ್ವೆ ನಿಲ್ದಾಣದಲ್ಲೇ ಬಿಟ್ಟು ಹೋಗಿದ್ದಾರೆ.

ಈ ಕಾರ್ಮಿಕರ ದಾಖಲೆಗಳನ್ನು ಪರಿಶೀಲಿಸಿದ ಜಿಲ್ಲಾಡಳಿತ ಅವರವರ ಊರುಗಳಿಗೆ ಕಳುಹಿಸಿ ಕ್ವಾರಂಟೈನ್​ಗೆ ಒಳಗಾಗುವಂತೆ ಸೂಚಿಸಿತು. ಅವರೊಂದಿಗೆ ಬಂದ ವ್ಯಕ್ತಿಯ ಬಳಿ ಟಿಕೆಟ್ ಇಲ್ಲವೆಂಬ ಕಾರಣಕ್ಕೆ ಹಾಗೂ ಮಾನಸಿಕ ಅಸ್ವಸ್ಥನಂತಿದ್ದ ಕಾರಣ ಪರಿಶೀಲನೆ ನಡೆಸದೇ, ರೈಲ್ವೆ ನಿಲ್ದಾಣದಲ್ಲೇ ಅಧಿಕಾರಿಗಳು ಬಿಟ್ಟು ಹೋಗಿದ್ದಾರೆ ಎನ್ನಲಾಗ್ತಿದೆ.

ಜಿಲ್ಲಾಧಿಕಾರಿ ವೈ.ಎಸ್​​.ಪಾಟೀಲ

ಬಳಿಕ ಆತ ಅಲ್ಲಿಂದ ನಗರದ ಬಸ್ ನಿಲ್ದಾಣದಲ್ಲಿ ಬಂದು ಮಲಗಿದ್ದಾನೆ. ಆತನ ಕೈಮೇಲೆ ಕ್ವಾರಂಟೈನ್​​ ಸೀಲ್ ಇರುವುದನ್ನು ಕಂಡು ಆತಂಕಕ್ಕೆ ಒಳಗಾಗಿದ ಸ್ಥಳೀಯರು, ಗೋಳಗುಮ್ಮಟ ಪೊಲೀಸ್ ಠಾಣೆಗೆ ಈ ಕುರಿತು ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕಾಗಮಿಸಿ, ಆ್ಯಂಬುಲೆನ್ಸ್​​​ ಮೂಲಕ ಆತನನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತು.

ಕ್ವಾರಂಟೈನ್​ ಸೀಲ್​ ಇದ್ದರೂ ಆತನನ್ನು ಹೇಗೆ ಹೊರಗೆ ಬಿಟ್ಟರು ಎಂಬುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ. ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 600ರ ಗಡಿ ದಾಟಿದೆ. ಜಿಲ್ಲಾಡಳಿತ ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಕೊರೊನಾ ಹರಡುವುದನ್ನು ತಡೆಯಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

Last Updated : Jul 8, 2020, 7:36 PM IST

ABOUT THE AUTHOR

...view details