ಕರ್ನಾಟಕ

karnataka

By

Published : Oct 2, 2020, 11:44 AM IST

ETV Bharat / state

ಆಸ್ಪತ್ರೆಯ ಶೌಚಾಲಯ ಶುಚಿಗೊಳಿಸಿದ ಜಿಲ್ಲಾ ಪಂಚಾಯತ್​​​ ಅಧ್ಯಕ್ಷೆ!

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕಾಳಗಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹೂಡಿರುವ ಜಿಲ್ಲಾ ಪಂಚಾಯತ್​ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಇಂದು ಗಾಂಧಿ ಜಯಂತಿ ಪ್ರಯುಕ್ತ ಆಸ್ಪತ್ರೆಯ ಶೌಚಾಲಯ ಶುಚಿಗೊಳಿಸಿ ಗಮನ ಸೆಳೆದಿದ್ದಾರೆ.

toilet cleaned by zp president
ವಿಜಯಪುರ

ವಿಜಯಪುರ: ಮಹಾತ್ಮ ಗಾಂಧೀಜಿಯವರ 151ನೇ ಜಯಂತಿ ಹಿನ್ನೆಲೆ ವಿಜಯಪುರ ಜಿಲ್ಲಾ ಪಂಚಾಯತ್​ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಶೌಚಾಲಯ ಶುಚಿಗೊಳಿಸುವ ಮೂಲಕ ವಿಭಿನ್ನ ರೀತಿಯಲ್ಲಿ ಗಾಂಧಿ ಜಯಂತಿ ಆಚರಿಸಿದರು.

ವಿಜಯಪುರ ಜಿಪಂ ಅಧ್ಯಕ್ಷೆ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕಾಳಗಿ ಗ್ರಾಮದಲ್ಲಿ ನಿನ್ನೆಯಿಂದ ಗ್ರಾಮ ವಾಸ್ತವ್ಯ ನಡೆಸುತ್ತಿರುವ ಅವರು, ಇಂದು ಬೆಳಗ್ಗೆ ಕಾಳಗಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಶೌಚಾಲಯ ಕ್ಲೀನ್ ಮಾಡಿದರು. ಕಳೆದ ರಾತ್ರಿ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ್ದ ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಇಂದು ಪೊರಕೆ, ಬ್ರಶ್ ಹಿಡಿದು ಶೌಚಾಲಯ ಕ್ಲೀನ್ ಮಾಡಿದರು.

ಜಿಪಂ ಸದಸ್ಯೆಯರಾದ ಪ್ರೇಮಾಬಾಯಿ ಚಹ್ವಾಣ, ಪದ್ಮಾವತಿ ವಾಲೀಕಾರ ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿಗೆ ಸಾಥ್​​ ನೀಡಿದರು.

ABOUT THE AUTHOR

...view details