ಕರ್ನಾಟಕ

karnataka

By

Published : Oct 26, 2019, 9:52 AM IST

ETV Bharat / state

PSI ದೈಹಿಕ ಪರೀಕ್ಷೆ ಹಾಜರಾಗಿ ಬರುವ ವೇಳೆ ಹೃದಯಾಘಾತದಿಂದ ಪೇದೆ ಸಾವು

ಪಿಎಸ್​ಐ ದೈಹಿಕ ಪರೀಕ್ಷೆ ಮುಗಿಸಿ ಕಲಬುರಗಿಯಿಂದ ಬಸ್​ನಲ್ಲಿ ಬರುವ ಸಂದರ್ಭದಲ್ಲಿ ತೀವ್ರ ಹೃದಯಾಘಾತದಿಂದ ಪೇದೆಯೊಬ್ಬರು ಸಾವನ್ನಪ್ಪಿದ್ದಾರೆ.

ಪೊಲೀಸ್ ಪೇದೆ ಚನ್ನಪ್ಪ ಕಲ್ಲಪ್ಪ ಕುಂಬಾರ

ವಿಜಯಪುರ:ಚಡಚಣ ಪೊಲೀಸ್ ಠಾಣೆಯ ಪೇದೆ ಚನ್ನಪ್ಪ ಕಲ್ಲಪ್ಪ ಕುಂಬಾರ(36) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಕಲಬುರಗಿಯಲ್ಲಿ ನಡೆಯುತ್ತಿರುವ PSI ದೈಹಿಕ ಪರೀಕ್ಷೆ ಮಗಿಸಿಕೊಂಡು ಮರಳುತ್ತಿರುವಾಗ ಹೃದಯಾಘಾತವಾಗಿದೆ. ದೈಹಿಕ ಪರೀಕ್ಷೆ ಮುಗಿಸಿ ಸರ್ಕಾರಿ ಬಸ್​ನಲ್ಲಿ ವಾಪಸ್ ಆಗುವಾಗ ಅಫಜಲಪುರ ಬಳಿ ಎದೆನೋವು ಕಾಣಿಸಿಕೊಂಡಿದ್ದರಿಂದ ಅಲ್ಲಿಯೇ ಬಸ್​​ನಿಂದ​ ಇಳಿದು ಆಸ್ಪತ್ರೆಗೆ ಹೋದ ಸಂದರ್ಭದಲ್ಲಿ ತೀವ್ರ ಎದೆನೋವಿನಿಂದ ಪೇದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ABOUT THE AUTHOR

...view details