ಕರ್ನಾಟಕ

karnataka

By

Published : May 13, 2019, 1:41 PM IST

ETV Bharat / state

ಟವೆಲ್ ಹಾಕಲು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬಸ್ ಅಥವಾ ರೈಲ್ವೆ ಸೀಟ್ ಅಲ್ಲ: ಯತ್ನಾಳ್​ಗೆ ಪಟ್ಟಣಶೆಟ್ಟಿ ಟಾಂಗ್​

ಸಾಮಾನ್ಯ ಕಾರ್ಯಕರ್ತರಿಗೂ ಪಕ್ಷ ಅವಕಾಶ ಮಾಡಿಕೊಡಲಿ. ಹೈಕಮಾಂಡ್​​​ ಏನಾದರು ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದ್ರೆ ಸಮರ್ಥವಾಗಿ ನಿಭಾಯಿಸುವೆ ಎಂದು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಹೇಳಿದ್ದಾರೆ.

ಅಪ್ಪು ಪಟ್ಟಣಶೆಟ್ಟಿ

ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಾನು ಯೋಗ್ಯನಿರುವುದಾಗಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಹೇಳಿದ್ದಾರೆ.

ಅಪ್ಪು ಪಟ್ಟಣಶೆಟ್ಟಿ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯ ಕಾರ್ಯಕರ್ತರಿಗೂ ಪಕ್ಷ ಅವಕಾಶ ಮಾಡಿಕೊಡಲಿ. ಹೈ ಕಮಾಂಡ್​​​ ಏನಾದರು ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ಸ್ವೀಕರಿಸುತ್ತೇನೆ ಎಂದರು. ಓರ್ವ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ರಾಜ್ಯಾದ್ಯಕ್ಷ ಸ್ಥಾನ ನೀಡಿದರೆ ಪಕ್ಷದಲ್ಲಿ ಅದು ಹೊಸ ಇತಿಹಾಸ ಸೃಷ್ಟಿಯಾಗಲಿದೆ. ಯಡಿಯೂರಪ್ಪ ನಂತರ ತಾನೇ ಡೈನಾಮಿಕ್ ಲೀಡರ್ ಎನ್ನುತ್ತಿರುವ ಯತ್ನಾಳ್​ಗೆ ಪಟ್ಟಣಶೆಟ್ಟಿ ಟಾಂಗ್ ಕೊಟ್ಟರು.

ಪಕ್ಷದಲ್ಲಿ ಯಾರೂ ಡೈನಾಮಿಕ್ ಹೀರೋ ಅನ್ನೋರು ಇಲ್ಲ. ಪಕ್ಷವೇ ನಮಗೆ ಡೈನಾಮಿಕ್, ಪಕ್ಷವೇ ಹೀರೋ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ್ದೇನಿ ಅಂತ ಯತ್ನಾಳ್​ ​ಹೇಳಿಕೆ ವಿಚಾರ ಪ್ರಸ್ತಾಪಿಸಿದ ಪಟ್ಟಣಶೆಟ್ಟಿ, ಟವೆಲ್ ಹಾಕಲು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬಸ್ ಅಥವಾ ರೈಲ್ವೆ ಸೀಟ್ ಅಲ್ಲ. ಪಕ್ಷದ ಸ್ಥಾನವನ್ನು ಯಾರಿಗೆ ಯೋಗ್ಯತೆ ಇರುತ್ತೋ ಅವರಿಗೆ ಸಿಗಲಿದೆ ತಿರುಗೇಟು ನೀಡಿದರು.

For All Latest Updates

TAGGED:

ABOUT THE AUTHOR

...view details