ಕರ್ನಾಟಕ

karnataka

ETV Bharat / state

ಪೇಜಾವರ ಶ್ರೀಗಳ ಸ್ಮರಿಸಿದ ಸ್ವಾಮೀಜಿಗಳು - pejavara shree latest news

ಪೇಜಾವರ ಶ್ರೀಗಳ ಜೊತೆಗಿನ ಒಡನಾಟ ನೆನೆದು ಕಣ್ಣೀರಾದ ಸ್ವಾಮೀಜಿಗಳು. ಶ್ರೀಗಳಿಗೆ ಇದ್ದ ಪ್ರಗತಿಪರ ನಿಲುವು ಅವರನ್ನು ಎಲ್ಲರ ಮೆಚ್ಚುಗೆಗೆ ಪಾತ್ರರಾಗುವಂತೆ ಮಾಡಿತು.

Swamiji Reminded Pajavar Sri
ಪೇಜಾವರ ಶ್ರೀಗಳ ಸ್ಮರಿಸಿದ ಸ್ವಾಮೀಜಿಗಳು

By

Published : Dec 29, 2019, 4:57 PM IST

ವಿಜಯಪುರ: ಪೇಜಾವರ ಶ್ರೀಗಳ ಸೇವೆ ಸ್ಮರಿಸಿ ಕಣ್ಣೀರಾದ ಸ್ವಾಮೀಜಿಗಳು. ಸೈದ್ಧಾಂತಿಕ ಭಿನ್ನಾಭಿಪ್ರಾಯವಿದ್ದರು ಸಂವಾದ ಮಾಡುವ ಗುಣ ಶ್ರೀಗಳದು. ದೀಘ್ರಕಾಲ ಉಡುಪಿ ಮಠದ ನೇತೃತ್ವ ವಹಿಸಿದ್ದರು ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಂತಾಪ ಸೂಚಿಸಿದರು.

ಪೇಜಾವರ ಶ್ರೀಗಳ ಸ್ಮರಿಸಿದ ಸ್ವಾಮೀಜಿಗಳು

ಅತಿ ಹೆಚ್ಚು ದಿನಗಳ‌ ಕಾಲ ಒಂದು ಮಠದ ಪೀಠಾಧಿಪತಿಯಾದ 20ನೇ ಶತಮಾನದ ಪೇಜಾವರ ಶ್ರೀಗಳ ಅಗಲಿಕೆ ನಮಗೆ ಹಾಗೂ ಕರ್ನಾಟಕ ತುಂಬದ ನಷ್ಟ ಉಂಟುಮಾಡಿದೆ. ಎಲ್ಲ ಧರ್ಮಗಳ ಏಳಿಗೆಗೆ ಚಿಂತಿಸಿದವರು. ವಿಶ್ವೇಶ್ವರ ತೀರ್ಥ ಸ್ವಾಮೀಜಿ ಸಿದ್ಧಗಂಗಾ ಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು ಎಂದು ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಸ್ಮರಿಸಿದರು.

ಶೈಕ್ಷಣಿಕ ಕ್ಷೇತ್ರದಲ್ಲಿ ಶಿವಕುಮಾರ ಸ್ವಾಮೀಜಿಯವರ ಸೇವೆಯನ್ನು ಯಾರು ಕೂಡ ಮಾಡಲು ಸಾಧ್ಯವಿಲ್ಲ ಎಂಬ ಮಾತನ್ನು ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಸ್ಮರಿಸುತ್ತಿದ್ದರು. ಶಿವಕುಮಾರ ಸ್ವಾಮೀಜಿ ಹಾಗೂ ಮಠದ ಜೊತೆ ಭಾವನಾತ್ಮಕ ಸಂಬಂಧವಿತ್ತು ಎಂದು ಹೇಳಿದರು.

ಮೈಸೂರಿನ ಗಣಪತಿ ಸಚ್ಚಿದಾನಂದ ಅವದೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಶ್ರೀಗಳ ಜೊತೆಗೆ ಕಳೆದ ದಿನಗಳನ್ನು ನೆನಪಿಸಿದರು. ಶ್ರೀಗಳಿಂದ ಅನೇಕ ಪಾಠಗಳನ್ನು ಕಲಿತ್ತಿದ್ದೇನೆ. ದಲಿತ ಕೇರಿಗಳ ಅಭಿವೃದ್ಧಿ, ಎಲ್ಲ ಸಮುದಾಯ ಸಮಾಜದ ಏಳಿಗೆಗೆ ಸದಾ ತುಡಿಯುತ್ತಿರುವ ಜೀವ ಅವರು ಎಂದು ಹೇಳಿದರು.

ತೋಂಟದಾರ್ಯ ಶ್ರೀಗಳು, ಮುಂಡರಗಿ ಅನ್ನದಾನೀಶ್ವರ ಶ್ರೀಗಳ ಸಂತಾಪ......

ಗದಗನಲ್ಲಿ ಸಂತಾಪ ಸೂಚಿಸಿ ಮಾತನಾಡಿದ ತೋಂಟದಾರ್ಯ ಮಠದ ಸಿದ್ದರಾಮ ಶ್ರೀಗಳು, ಬ್ರಾಹ್ಮಣ ಮಠಾಧೀಶರು, ಲಿಂಗಾಯತ ಮಠಗಳಿಗೆ ಹೋಗುವಂತ ಸಂಪ್ರದಾಯ ಇರಲಿಲ್ಲ. ಬ್ರಾಹ್ಮಣ ಮಠದ ಇತಿಹಾಸದಲ್ಲಿ ಮೊದಲ ಬಾರಿಗೆ ಲಿಂಗಾಯತ ಮಠದ ಕಾರ್ಯಕ್ರಮಕ್ಕೆ ಪೇಜಾವರ ಶ್ರೀ ಆಗಮಿಸಿದ್ದರು. ಸಂಪ್ರದಾಯವನ್ನು ಮುರಿದು, ಪ್ರಗತಿ ಪರ ನಿಲುವನ್ನು ಎತ್ತಿ ತೋರಿಸಿದ್ದರು ಎಂದು ನೆನಪಿಸಿಕೊಂಡರು.

ABOUT THE AUTHOR

...view details