ಕರ್ನಾಟಕ

karnataka

ETV Bharat / state

ಗಜಾನನ ಉತ್ಸವ ಮಂಡಳಿಯಿಂದ ಸರಳ ಗಣೇಶ ನಿಮಜ್ಜನ ಕಾರ್ಯಕ್ರಮ - ವಿಜಯಪುರ ಸರಳ ಗಣೇಶ ನಿಮಜ್ಜನ ಕಾರ್ಯಕ್ರಮ

ವಿಜಯಪುರ ನಗರದಲ್ಲಿ ಗಜಾನನ ಉತ್ಸವ ಮಂಡಳಿ ವತಿಯಿಂದ ಗಣೇಶ ನಿಮಜ್ಜನ ಕಾರ್ಯಕ್ರಮ ಸರಳವಾಗಿ ನಡೆಯಿತು.

simple Ganesha immersion program
ಗಣೇಶ ನಿಮಜ್ಜನ ಕಾರ್ಯಕ್ರಮ

By

Published : Aug 30, 2020, 9:02 PM IST

ವಿಜಯಪುರ: ನಗರದಲ್ಲಿ ಗಜಾನನ ಉತ್ಸವ ಮಂಡಳಿ ವತಿಯಿಂದ ಗಣೇಶ ನಿಮಜ್ಜನ ಕಾರ್ಯಕ್ರಮ ಸರಳವಾಗಿ ನಡೆಯಿತು.

ಕಳೆದ ಒಂಭತ್ತು ದಿನಗಳ ಕಾಲ ಎಂಟು ಅಡಿ ಎತ್ತರದ ಫೈಬರ್ ಗಣೇಶನಿಗೆ ಪೂಜೆ ಸಲ್ಲಿಸಲಾಯಿತು. ಲೋಕ ಕಲ್ಯಾಣಕ್ಕಾಗಿ ಹೋಮ ಹವನವೂ ನಡೆದಿದೆ. ವಿಜಯಪುರವನ್ನು ಹಚ್ಚ ಹಸಿರಾಗಿಸುವ ಕನಸು ಹೊತ್ತು ನಡೆಸುತ್ತಿರುವ ವೃಕ್ಷ ಅಭಿಯಾನದಡಿ ಸಸಿ ನೆಡುವ ಕಾರ್ಯಕ್ಕೆ ಎರಡು ದಿನಗಳ ಹಿಂದೆ ಮಾಜಿ ಸಚಿವ ಎಂ.ಬಿ.ಪಾಟೀಲ ಚಾಲನೆ ನೀಡಿದ್ದಾರೆ. ಮಾಜಿ ಕೇಂದ್ರ ಸಚಿವ ಹಾಗೂ ಸಂಸದ ರಮೇಶ ಜಿಗಜಿಣಗಿ ಸೇರಿದಂತೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಕೂಡಾ ಸಸಿ ನೆಟ್ಟು ಅಭಿಯಾನಕ್ಕೆ ಸಾಥ್ ನೀಡಿದ್ದರು.

ಗಜಾನನ ಉತ್ಸವ ಮಂಡಳಿ ವತಿಯಿಂದ ಗಣೇಶ ನಿಮಜ್ಜನ ಕಾರ್ಯಕ್ರಮ ಸರಳವಾಗಿ ನಡೆಯಿತು.

ಇಂದು ನಡೆದ ನಿಮಜ್ಜನ ಕಾರ್ಯಕ್ರಮದಲ್ಲಿ ವೈದ್ಯ, ಸಾವಯವ ಕೃಷಿಕ ಹಾಗೂ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಸನ್ಮಾನಿಸಿದರು. ನಗರದಲ್ಲಿ ವಿವಿಧ ಮಂಡಳಿಗಳ ಅಧ್ಯಕ್ಷರುಗಳಿಗೆ ಈ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ನಂತರ ಮಾತನಾಡಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಕೊರೊನಾ ಭೀತಿಯಿಂದ ಈ ಬಾರಿ ಗಣೇಶೋತ್ಸವ ಆಚರಿಸುವ ಬಗ್ಗೆ ಸಂಶಯವಿತ್ತು. ಆದರೆ ಸರ್ಕಾರ ಷರತ್ತುಬದ್ಧ ಆಚರಣೆಗೆ ಅವಕಾಶ ಕಲ್ಪಿಸಿದ್ದರಿಂದ ಗಣೇಶೋತ್ಸವ ನಡೆಯಿತು ಎಂದು ಸಂತಸ ವ್ಯಕ್ತಪಡಿಸಿದರು. ಇದೇ ಉತ್ಸವ ಆಚರಣೆಗೆ ಅನುಮತಿ ನೀಡಿದ ವಿಜಯಪುರ ಜಿಲ್ಲಾಡಳಿತಕ್ಕೆ ಕೃತಜ್ಞತೆ ಸಲ್ಲಿಸಿದರು.

ABOUT THE AUTHOR

...view details