ಕರ್ನಾಟಕ

karnataka

ETV Bharat / state

ಟೆಂಡರ್​ಗೂ ಮುನ್ನವೇ ತರಾತುರಿಯಲ್ಲಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ..!

ವಿಜಯಪುರ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯನ್ನು ಟೆಂಡರ್​ ಕರೆಯುವ ಮುನ್ನವೇ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಕ್ರಮವನ್ನು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸಮರ್ಥಿಸಿಕೊಂಡಿದ್ದಾರೆ.

By

Published : Jun 28, 2019, 7:42 AM IST

Updated : Jun 28, 2019, 1:21 PM IST

ಟೆಂಡರ್​ಗೂ ಮುನ್ನವೇ ಕಾಮಗಾರಿಗೆ ಶಂಕುಸ್ಥಾಪನೆ

ವಿಜಯಪುರ: ಜಿಲ್ಲಾಸ್ಪತ್ರೆಯ ಆವರಣದಲ್ಲಿ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಲಿಂಕ್ ರಸ್ತೆ ನಿರ್ಮಾಣದಲ್ಲಿ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಜಿಲ್ಲೆಯಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಆಡಿದ್ದೇ ಆಟವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಟೆಂಡರ್​ಗೂ ಮುನ್ನವೇ ಕಾಮಗಾರಿಗೆ ಶಂಕುಸ್ಥಾಪನೆ

ಮಹಾನಗರ ಪಾಲಿಕೆ ಇ-ಪ್ರೊಕ್ಯೂರ್​ಮೆಂಟ್ ಮುಖಾಂತರ ಆನ್​ಲೈನ್​ನಲ್ಲಿ ಬರೋಬ್ಬರಿ ಐದು ಕೋಟಿ ರೂಪಾಯಿಗಳ ಆರು ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿತ್ತು. ಇವೆಲ್ಲವೂ ವಿಜಯಪುರ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಲಿಂಕ್ ರಸ್ತೆಗಳಾಗಿವೆ. ಈ ಟೆಂಡರ್​​ ಸಲ್ಲಿಸುವ ಅವಧಿ ಮುನ್ನವೇ ಗುತ್ತಿಗೆದಾರರು ಕಾಮಗಾರಿ ಆರಂಭಿಸಿ ತರಾತುರಿಯಲ್ಲಿ ನಗರ ಶಾಸಕರಿಂದ ಶಂಕುಸ್ಥಾಪನೆ ಸಹ ಮಾಡಿಸಿದ್ದಾರೆ.

ಕೋಟ್ಯಂತರ ರೂಪಾಯಿ ಕಾಮಗಾರಿಗಳನ್ನು ಟೆಂಡರ್ ಪ್ರಕ್ರಿಯೆಗೂ ಮುನ್ನವೇ ಅಷ್ಟೊಂದು ತರಾತುರಿಯಲ್ಲಿ ನಗರ ಶಾಸಕರು ಯಾಕೆ ಶಂಕುಸ್ಥಾಪನೆ ನೆರವೇರಿಸಿದ್ರು ಎಂಬ ಸಂಶಯವೂ ಸಹ ಕಾಡುತ್ತಿದೆ. ಇದರಲ್ಲೇನಾದ್ರೂ ರಹಸ್ಯ ಅಡಗಿದೆಯೇ ಎಂಬ ಪ್ರಶ್ನೆ ಪ್ರಜ್ಞಾವಂತರಲ್ಲಿ ಮೂಡಿದೆ. ಇನ್ನು ಈ ಕುರಿತು ಸ್ವತಃ ನಗರ ಶಾಸಕರನ್ನೇ ಪ್ರಶ್ನಿಸಿದ್ರೆ ಅವರು ತಮ್ಮದೇ ರೀತಿಯಲ್ಲಿ ಇದನ್ನು ಸಮರ್ಥಿಸಿಕೊಂಡಿದ್ದಾರೆ. ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ಆಗುತ್ತಿರುವುದರಿಂದ ನಾನು ತಕರಾರು ಮಾಡುವುದಿಲ್ಲ ಎಂದಿದ್ದಾರೆ. ಹೀಗಾಗಿ ಜನಪ್ರತಿನಿಧಿ, ಅಧಿಕಾರಿ ಹಾಗೂ ಗುತ್ತಿಗೆದಾರರ ಮಧ್ಯೆ ಹೊಂದಾಣಿಕೆ ಏನಾದ್ರು ನಡೀತಿದ್ಯಾ ಅನ್ನೋ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.

Last Updated : Jun 28, 2019, 1:21 PM IST

For All Latest Updates

ABOUT THE AUTHOR

...view details