ಕರ್ನಾಟಕ

karnataka

ETV Bharat / state

ರಾಹುಲ್​ ಹುಟ್ಟುಹಬ್ಬಕ್ಕೆ ವಿದ್ಯಾರ್ಥಿಗಳಿಗೆ ಉಚಿತ ನೋಟ್​ಬುಕ್ ವಿತರಣೆ - undefined

ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಹುಟ್ಟುಹಬ್ಬ ಪ್ರಯುಕ್ತ ಮುದ್ದೇಬಿಹಾಳ ಯುವಕಾಂಗ್ರೆಸ್​ ವತಿಯಿಂದ ವಿದ್ಯಾರ್ಥಿಗಳಿಗೆ ನೋಟ್​ಬುಕ್​ ವಿತರಿಸಲಾಗಿದೆ.

ನೋಟ್​ಬುಕ್ ವಿತರಣೆ

By

Published : Jun 19, 2019, 8:10 PM IST

ವಿಜಯಪುರ:ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರ 49ನೇ ಹುಟ್ಟುಹಬ್ಬ ಪ್ರಯುಕ್ತ ಇಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಯುವ ಕಾಂಗ್ರೆಸ್ ಸಮಿತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್​ಬುಕ್ ಹಾಗೂ ಪೆನ್​ ವಿತರಿಸಲಾಗಿದೆ.

ಮುದ್ದೇಬಿಹಾಳ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮ

ಯುವ ಕಾಂಗ್ರೆಸ್ ಸಮಿತಿ ಹಾಗೂ ಎನ್​ಎಸ್​ಯುಐ ವತಿಯಿಂದ ನಗರದ ಜ್ಞಾನಗಂಗೋತ್ರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಮತ್ತು ಪೆನ್​ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮುದ್ದೇಬಿಹಾಳ ಯುವ ಕಾಂಗ್ರೆಸ್ ಅಧ್ಯಕ್ಷ ಮಹ್ಮದ್​ ರಫೀಕ್​ ಶಿರೋಳ ಮಾತನಾಡಿ, ಕಾಂಗ್ರೆಸ್​​ ಈ ದೇಶದ ಎಲ್ಲ ವರ್ಗದ ಜನರ ಪರವಾಗಿದೆ ಎಂದರು.

ಇದೇ ವೇಳೆ ವಿಜಯಪುರ ಎನ್​ಎಸ್​ಯುಐ ಜಿಲ್ಲಾಧ್ಯಕ್ಷ ಸದ್ದಾಂ ಕುಟೋಜಿ, ಮುದ್ದೇಬಿಹಾಳ ಯುವ ಕಾಂಗ್ರೆಸ್ ಉಪಾಧ್ಯಕ್ಷ ಯುಸೂಫ್​ ನಾಯ್ಕೋಡಿ, ವಿಜಯಪುರ ಯುವ ಕಾಂಗ್ರೆಸ್ ಕಾಯ೯ದರ್ಶಿ ಶರಣು ಚಲವಾದಿ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

For All Latest Updates

TAGGED:

ABOUT THE AUTHOR

...view details