ಕರ್ನಾಟಕ

karnataka

ETV Bharat / state

ಕುಡಿಯುವ ನೀರಿಗೆ ಹಾಹಾಕಾರ: ಗ್ರಾ.ಪಂ ಕಚೇರಿಗೆ ಬೀಗ ಜಡಿದು ಜನರ ಪ್ರತಿಭಟನೆ - undefined

ಬಿಸಿಲ ನಾಡೆಂದೇ ಹಣೆಪಟ್ಟಿ ಕಟ್ಟಿಕೊಂಡಿರುವ ವಿಜಯಪುರ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದೆ. ಗ್ರಾಮಗಳ ಜನರು ಅಧಿಕಾರಿಗಳು ಹನಿ ನೀರಿಗೂ ಪರಿತಪಿಸುವ ಪರಿಸ್ಥಿತಿ ಬಂದೊದಗಿದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲವೆಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

By

Published : Apr 22, 2019, 11:11 AM IST

ವಿಜಯಪುರ: ನೀರಿನ ಸಮಸ್ಯೆಯಿಂದ ಬೇಸತ್ತ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮಸ್ಥರು ಗ್ರಾಮ ಪಂಚಾಯತ್​ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.

ಗ್ರಾಮ ಪಂಚಾಯತ್​ ಕಚೇರಿಗೆ ಬೀಗ ಜಡಿದು ಜನರ ಪ್ರತಿಭಟನೆ

ಖಾಲಿ ಕೊಡಗಳನ್ನ ಹಿಡಿದು ಗ್ರಾಮ ಪಂಚಾಯತ್​ ಕಚೇರಿಗೆ ಆಗಮಿಸಿದ್ದ ಬಿದರಕುಂದಿ ಗ್ರಾಮದ 3ನೇ ವಾರ್ಡಿನ ನಿವಾಸಿಗಳು ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ. ಸುಮಾರು ಮುರು ನಾಲ್ಕು ತಿಂಗಳಿಂದ ನೀರಿನ ಸಮಸ್ಯೆ ಇದ್ದು, ಯಾವ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿಲ್ಲ. ಕೂಡಲೇ ನಮ್ಮ ವಾರ್ಡಿಗೆ ನೀರು ಒದಗಿಸುವಂತೆ ಆಗ್ರಹಿಸಿದರು. ಅಲ್ಲದೆ 3ನೇ ವಾರ್ಡಿನಲ್ಲಿ ಸುಮಾರು 200 ಮನೆಗಳಿವೆ, ಯಾವ ಮನೆಗೂ ಕುಡಿಯುವ ನೀರಿನ ನಲ್ಲಿ ಸಂಪರ್ಕ ಕಲ್ಪಿಸಿಲ್ಲ. ಈ ವಾರ್ಡಿನ ಪಕ್ಕದಲ್ಲಿ ಕೇವಲ ಒಂದೇ ಒಂದು ನೀರಿನ ಟ್ಯಾಂಕ್ ಇದ್ದು, ಅದಕ್ಕೂ ಕೂಡ ಸರಿಯಾಗಿ ನೀರು ಪುರೈಸಿಲ್ಲ. ಹಗಲು ರಾತ್ರಿ ಎನ್ನದೆ ನೀರಿನ ಟ್ಯಾಂಕ್ ಹತ್ತಿರವೇ ಕಾಯುವ ಪರಿಸ್ಥಿತಿ ಇದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ತಾಲೂಕು ಪಂಚಾಯತ್​ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ದೇಸಾಯಿ ಪ್ರತಿಭಟನಾಕಾರರ ಮನವೊಲಿಸಿ ಗ್ರಾಮ ಪಂಚಾಯಯತ್​ಗೆ ಹಾಕಿದ ಬೀಗವನ್ನು ತೆಗೆಸಿದ್ದಾರೆ. ಈಗಾಗಲೇ 3ನೇ ವಾರ್ಡಿಗೆ ಪೈಪ್​ಲೈನ್ ಅಳವಡಿಸಲು ಟೆಂಡರ್​ ಕರೆಯಲು ನಿರ್ಧರಿಸಲಾಗಿದೆ. ಚುನಾವಣೆ ಕಾರಣ ತಾತ್ಕಾಲಿಕವಾಗಿ ಟೆಂಡರ್​ ಪ್ರಕ್ರಿಯೆಯನ್ನು ತಡೆ ಹಿಡಿಯಲಾಗಿದೆ. ಚುನಾವಣೆ ಮುಗಿದ ಕೂಡಲೇ ಟೆಂಡರ್​ ಪ್ರಕ್ರಿಯೆ ಆರಂಭಿಸಿ ವಾರ್ಡಿಗೆ‌ ನೀರು ಪೂರೈಸಲಾಗುವುದು ಅಂತ ಭರವಸೆ ನೀಡಿದ್ದಾರೆ.

ಅಧಿಕಾರಿಗಳ ಭರವಸೆ ಹಿನ್ನೆಲೆ ಪ್ರತಿಭಟನೆ ಹಿಂಪಡೆಯದ ಗ್ರಾಮಸ್ಥರು, ನೀರು ಸರಬರಾಜು ಆಗದೆ ಹೋದರೆ ಉಗ್ರ ಹೋರಾಟ ನಡೆಸೋದಾಗಿ ಎಚ್ಚರಿಕೆ ನೀಡಿದ್ದಾರೆ.

For All Latest Updates

TAGGED:

ABOUT THE AUTHOR

...view details