ಕರ್ನಾಟಕ

karnataka

ETV Bharat / state

ಎಸ್‌ಡಿಪಿಐ - ಪಿಎಫ್‌ಐ ಬಿಜೆಪಿಯ ಬಿ ಟೀಂ: ಪ್ರಮೋದ್​ ಮುತಾಲಿಕ್ ಗಂಭೀರ ಆರೋಪ - ವಿಜಯಪುರ

ಬಿಜೆಪಿಯಲ್ಲಿ ನಮ್ಮಂಥ ಹೋರಾಟಗಾರರಿಗೆ ಅವಕಾಶ ಇಲ್ಲ, ಹಿಂದುತ್ವವಾದಿಗಳಿಗೆ ಸದ್ಯದ ರಾಜಕೀಯದಲ್ಲಿ ಅವಕಾಶ ಇಲ್ಲ. ಕಳ್ಳರು, ಭ್ರಷ್ಟರಿಗೆ ಮಾತ್ರ ಬಿಜೆಪಿಯಲ್ಲಿ ಅವಕಾಶ ಇದೆ ಹೀಗಾಗಿ ನಿಶ್ಚಿತವಾಗಿ ಚುನಾವಣೆಗೆ ನಿಲ್ಲಲ್ಲ ಎಂದು ಪ್ರಮೋದ್​ ಮುತಾಲಿಕ್ ಹೇಳಿದರು.

Pramod Muthalik talk about PFI and SDPI in Vijayapura
ಪ್ರಮೋದ್​ ಮುತಾಲಿಕ್

By

Published : Jul 22, 2022, 4:25 PM IST

ವಿಜಯಪುರ :ಎಸ್‌ಡಿಪಿಐ ಮತ್ತು ಪಿಎಫ್‌ಐ ಬಿಜೆಪಿಯ ಬಿ ಟೀಂ ಎಂಬ ವಿರೋಧ ಪಕ್ಷಗಳ ಆರೋಪ ನೂರಕ್ಕೆ ನೂರು ಸತ್ಯವಾಗಿದೆ. ಬಿಜೆಪಿಗೆ ದೇಶದ ಮತ್ತು ಹಿಂದೂ ಕಾರ್ಯಕರ್ತರ ಸುರಕ್ಷತೆ ಬೇಕಿಲ್ಲ, ಅಧಿಕಾರ ಒಂದೇ ಬಿಜೆಪಿಗೆ ಮುಖ್ಯವಾಗಿದೆ. ರಾಜ್ಯದ ಸಂಸದರು, ಶಾಸಕರು ಎಸ್‌ಡಿಪಿಐ ಹಾಗೂ ಪಿಎಫ್‌ಐ ಬ್ಯಾನ್‌ ಮಾಡುವಂತೆ ಕೇಂದ್ರಕ್ಕೆ ಹೋಗಿ ಮನವಿ ಸಲ್ಲಿಸಿದ್ದರು, ಈಗ ಕೇಂದ್ರ ಮತ್ತು ರಾಜ್ಯದಲ್ಲಿ ತಮ್ಮದೇ ಸರ್ಕಾರವಿದ್ದರೂ ಬಾಯಿ ಮುಚ್ಚಿಕೊಂಡು ಕೂತಿದ್ದಾರೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​ ಗಂಭೀರ ಆರೋಪ ಮಾಡಿದರು.

ಇತ್ತೀಚಿಗೆ ಬಾಗಲಕೋಟೆ ಜಿಲ್ಲೆಯಲ್ಲಿ ಕೋಮು ಗಲಭೆಯಲ್ಲಿ ಬಂಧನಕ್ಕೆ ಒಳಗಾಗಿ ನಗರದ ದರ್ಗಾ ಜೈಲಿನಲ್ಲಿರುವ 13 ಹಿಂದೂ ಕಾರ್ಯಕರ್ತರನ್ನು ಭೇಟಿಯಾಗಿ ಧೈರ್ಯ ತುಂಬಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್‌ನವರು ಏನು ಮಾಡಿದ್ದಾರೆ ಎಂಬುದು ರಮೇಶ ಕುಮಾರ ಬಾಯಿ ಮೂಲಕ ಹೊರಬಂದಿದೆ. ನೆಹರು ಮನೆತನದ ಮೂಲಕ ದೇಶವನ್ನು ಈವರೆಗೂ ಲೂಟಿ ಮಾಡಿದ್ದಾರೆ. ಇದನ್ನು ತಡೆಯುವ ಶಕ್ತಿ ಪ್ರಧಾನಿ ಮೋದಿ ಹಾಗೂ ಯೋಗಿ ಅವರಿಗೆ ಬರಲಿ ಎಂದು ವಿನಂತಿಸುವೆ ಎಂದರು.

ಎಸ್‌ಡಿಪಿಐ ಮತ್ತು ಪಿಎಫ್‌ಐ ಬಿಜೆಪಿಯ ಬಿ ಟೀಂ

ಮುಂದಿನ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಪ್ರತಿಕ್ರಿಯಿಸಿದ ಮುತಾಲಿಕ್‌, ನಮ್ಮಂಥ ಹೋರಾಟಗಾರರಿಗೆ ರಾಜಕೀಯದಲ್ಲಿ ಅವಕಾಶ ಇಲ್ಲ, ಹಿಂದುತ್ವವಾದಿಗಳಿಗೆ ಸದ್ಯದ ರಾಜಕೀಯದಲ್ಲಿ ಅವಕಾಶ ಇಲ್ಲ. ಕಳ್ಳರು, ಭ್ರಷ್ಟರಿಗೆ ಮಾತ್ರ ಬಿಜೆಪಿಯಲ್ಲಿ ಅವಕಾಶ ಇದೆ. ಹೀಗಾಗಿ ನಿಶ್ಚಿತವಾಗಿ ಚುನಾವಣೆಗೆ ನಿಲ್ಲಲ್ಲ ಎಂದರು.

ಕೆರೂರು ಘಟನೆಗೆ ಖಂಡನೆ:ಇದೇ ವೇಳೆ, ಕೆರೂರಿನಲ್ಲಿ ನಡೆದ ಕೋಮು ಗಲಭೆಯನ್ನು ಮುತಾಲಿಕ ಖಂಡಿಸಿದರು. ಒಬ್ಬ ಭಟ್ಕಳದ ಮಹಿಳೆ ಚಾಕೂ ತಂದು ಇರಿದಿದ್ದಾರೆ. ಈ ಘಟನೆ ನೋಡಿದರೆ ಭಟ್ಕಳದಲ್ಲಿ ಇನ್ನು ಭಯೋತ್ಪಾದನೆಯ ಕುಕೃತ್ಯ ಜೀವಂತವಾಗಿದೆ ಎಂದರು.

ಇದನ್ನೂ ಓದಿ :ನಾನು ಬೇಗ ಆರೋಪ ಮುಕ್ತ ಆಗಿ ಬರ್ತೇನೆ ಎಂದು ಮೊದಲೇ ಹೇಳಿದ್ದೆ: ಕೆ.ಎಸ್. ಈಶ್ವರಪ್ಪ

ABOUT THE AUTHOR

...view details