ಕರ್ನಾಟಕ

karnataka

ETV Bharat / state

ತೊಗರಿಗೆ ಬೆಂಬಲ ಬೆಲೆ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ - Pigeon pea rate

ವಿಜಯಪುರ ಜಿಲ್ಲೆಯಲ್ಲಿ ಈ ಬಾರಿ ಹಿಂಗಾರು ಮಳೆ ಉತ್ತಮವಾದ್ದರಿಂದ ತೊಗರಿ ಬೆಳೆ ಹೆಚ್ಚಾಗಿದ್ದು, ತೊಗರಿಗೆ ಬೆಂಬಲ ಬೆಲೆ ನೀಡಿ ಎಂದು ರೈತ ಕಾರ್ಮಿಕ ಸಂಘಟನೆಯವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

plea to District Collector
ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ರೈತ ಕಾರ್ಮಿಕ ಸಂಘಟನೆ

By

Published : Dec 2, 2019, 8:34 PM IST

Updated : Dec 2, 2019, 9:13 PM IST

ವಿಜಯಪುರ:ರೈತರು ಬೆಳೆದ ತೊಗರಿ ಬೆಳೆಗೆ 10 ಸಾವಿರ ಬೆಂಬಲ ಬೆಲೆ ಹಾಗೂ ಪ್ರತಿ‌ ಗ್ರಾಮ ಪಂಚಾಯತ್ ಕೇಂದ್ರಗಳಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸುವಂತೆ, ರೈತ ಕಾರ್ಮಿಕ ಸಂಘಟನೆಯವರು ‌ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ‌ ಸಲ್ಲಿದರು.

ಜಿಲ್ಲೆಯಲ್ಲಿ ಹಿಂಗಾರು ಮಳೆ ಉತ್ತಮವಾಗಿದ್ದರಿಂದ ರೈತರು ಹೆಚ್ಚಾಗಿ ತೊಗರಿ ಬೆಳೆ ಬೆಳೆದಿದ್ದು, ಸರ್ಕಾರ ಪ್ರತಿ ಕ್ವಿಂಟಲ್ ತೊಗರಿಗೆ 10 ಸಾವಿರ ಬೆಂಬಲ ಬೆಲೆಯನ್ನು‌ ನಿಗದಿಪಡಿಸಬೇಕು. ಇನ್ನು ತೊಗರಿ ಮಾರಾಟ ಕೇಂದ್ರದಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾದ ಪರಿಣಾಮ ತೊಗರಿಗೆ ಸರಿಯಾದ ಬೆಲೆ ಬರುತ್ತಿಲ್ಲ. ಈ ಕೂಡಲೆ ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟುವ ಕ್ರಮ‌ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ರೈತ ಕಾರ್ಮಿಕ ಸಂಘಟನೆ

ತೊಗರಿ ಮಾರಾಟದ ಹಣವನ್ನು ರೈತರ ಬ್ಯಾಂಕು ಖಾತೆಗಳಿಗೆ ಜಮಾ ಮಾಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ, ತೊಗರಿ ಬೆಳೆಗಾರರ ಕ್ಷೇಮಾಭಿವೃದ್ಧಿಗೆ ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ‌ ವೈ ಎಸ್ ಪಾಟೀಲ ಅವರಿಗೆ ರೈತ ಕಾರ್ಮಿಕ‌ ಸಂಘಟನೆಯ ಕಾರ್ಯಕರ್ತರು ಮನವಿ ಸಲ್ಲಿಸಿದರು.

Last Updated : Dec 2, 2019, 9:13 PM IST

ABOUT THE AUTHOR

...view details