ಕರ್ನಾಟಕ

karnataka

ETV Bharat / state

ವಿಜಯಪುರ: ಚಿತ್ರ ಪ್ರದರ್ಶನ ಆರಂಭಗೊಂಡರು ಬಾರದ ಪ್ರೇಕ್ಷಕರು - ವಿಜಯಪುರ ಸುದ್ದಿ

ಮಾರ್ಚ್ 14 ರಿಂದ ಸಿನಿಮಾ ಮಂದಿರಗಳಿಗೆ ಬೀಗ ಹಾಕಿದ್ದ ಮಾಲೀಕರು ಪ್ರಸ್ತುತ ಕೊರೊನಾ ತಡೆಗೆ ಸರ್ಕಾರದ ನಿರ್ದೇಶನ ಪಾಲನೆಯೊಂದಿಗೆ ಥಿಯೇಟರ್​ಗಳು ಕಳೆದ ಶುಕ್ರವಾರದಿಂದ ಆರಂಭಿಸಿದ್ದಾರೆ. ಆದರೆ ಸಿನಿಮಾ ವೀಕ್ಷಿಸರು ಪ್ರೇಕ್ಷಕರು ಬಾರದ ಹಿನ್ನೆಲೆ ನಷ್ಟ ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Vijayapura News
ವಿಜಯಪುರ: ಚಿತ್ರ ಪ್ರದರ್ಶನ ಆರಂಭಗೊಂಡರು ಬಾರದ ಪ್ರೇಕ್ಷಕರು

By

Published : Nov 22, 2020, 3:53 PM IST

ವಿಜಯಪುರ: ಕೊರೊನಾ ಭೀತಿಯಿಂದ ಬೀಗ ಹಾಕಿದ ಚಿತ್ರ ಮಂದಿರಗಳಿಗೆ ಸರ್ಕಾರ ಕಳೆದ ತಿಂಗಳು ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡಿದೆ. ಇತ್ತ ಏಕಮುಖ ಪರದೆಯ ಚಿತ್ರಮಂದಿರಗಳಿಗೆ ತೆರೆಗೆ ಕಡಿಮೆ ಮಾಡ್ಬೇಕು ಎಂದು ಮಾಲೀಕರು ಚಿತ್ರ ಮಂದಿರಗಳಿಗೆ ಬೀಗ ಜಡಿದಿದ್ರು. ಪ್ರಸ್ತುತ ನಷ್ಟದಲ್ಲಿರುವ ಚಿತ್ರ ಮಂದಿರಗಳು ಓಪನ್ ಆಗಿದ್ರು, ಸಿನಿಮಾ ಪ್ರೇಕ್ಷಕರಿಲ್ಲದೆ ಮತ್ತೇ ನಷ್ಟಕ್ಕೆ‌ ಸಿಲುಕುವಂತಾಗಿದೆ.

ವಿಜಯಪುರ: ಚಿತ್ರ ಪ್ರದರ್ಶನ ಆರಂಭಗೊಂಡರು ಬಾರದ ಪ್ರೇಕ್ಷಕರು

ಕೊರೊನಾ ವೈರಸ್ ಸಿನಿಮಾ‌ ಉದ್ಯಮವನ್ನೂ ನುಂಗಿತು. ವೈರಸ್ ದಾಳಿಗೆ ತತ್ತರಿದ ಥಿಯೇಟರ್ ಮಾಲೀಕರು ಮಾರ್ಚ್ 14 ರಿಂದ ಸಿನಿಮಾ ಮಂದಿರಗಳಿಗೆ ಬೀಗ ಹಾಕಿದ್ರು. ಇತ್ತ ಸರ್ಕಾರ ಏಕಮುಖ ಪರದೆ ಚಿತ್ರಮಂದಿರಗಳಿಗೆ ವಿಧಿಸುತ್ತಿರುವ ತೆರೆಗೆ ಹೊರೆಯಾಗುತ್ತಿದೆ ಎಂದು ಬಹುತೇಕ ಚಿತ್ರಮಂದಿರ ಮಾಲೀಕರು ಸಿನಿಮಾ ಪ್ರದರ್ಶನ ಮಾಡದೆ ಬಂದ್ ಮುಂದುವರಿಸಿದ್ರು. ಗುಮ್ಮಟನಗರಿ ವಿಜಯಪುರ ಜಿಲ್ಲೆಯಲ್ಲಿ 28 ಏಕಮುಖ ಪರದೆ ಮಂದಿರಗಳಿವೆ. ಮಾಲೀಕರು ತೆರಿಗೆ ವಿನಾಯಿತಿಗೆ ಸರ್ಕಾರ ಮುಂದಾಗುವಂತೆ ಬೇಡಿಕೆಯಿಟ್ಟಿದ್ದರು‌. ಬಳಿಕ ನ.20 ರಂದು ಜಿಲ್ಲೆಯ ಕೆಲವು ನಿಸಿಮಾ ಥಿಯೇಟರ್​ಗಳು ಆರಂಭಗೊಂಡರು ಪ್ರೇಕ್ಷಕರಿಲ್ಲದೆ ಕಂಗಾಲಾಗಿದ್ದಾರೆ.

ನಿಯಮ ಪಾಲನೆ ಮಾಡಿದ್ರು ಸಿನಿಮಾ ನೋಡದ ಜನ:

ಕೊರೊನಾ ತಡೆಗೆ ಸರ್ಕಾರದ ನಿರ್ದೇಶನ ಪಾಲನೆಯೊಂದಿಗೆ ಥಿಯೇಟರ್​ಗಳು ಕಳೆದ ಶುಕ್ರವಾರದಿಂದ ಆರಂಭಿಸಿಲಾಗಿದೆ. ಕೊರೊನಾ ಭಯಕ್ಕೆ ಹೆದರಿದ ಸಿನಿ ಪ್ರೀಯರು‌ ಚಿತ್ರ ಮಂದಿರಗಳಲ್ಲಿ ಸಿನಿಮಾ ವೀಕ್ಷಕರು ಮುಂದಾಗದಿರೋದು, ಸಂಕಷ್ಟದಲ್ಲಿದ ಮಾಲೀಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಥಿಯೇಟರ್ ನಿರ್ವಹಣೆಗೂ ಸಾಲದ ಕಲೆಕ್ಷನ್:

ಕಳೆದ 2 ದಿನಗಳಿಂದ ಸಿನಿಮಾ ಪ್ರದರ್ಶನ ಆರಂಭಿಸಲಾಗಿದೆ. ಕೇವಲ ಬೆರಳಿಣಿಕೆಯಷ್ಟೇ ಪ್ರೇಕ್ಷಕರು ನಿಸಿಮಾ ಮಂದಿರಗಳತ್ತ ಬರ್ತಿದ್ದಾರೆ. ದಿನವಿಡಿ ಕಲೆಕ್ಷನ್ 4 ಸಾವಿರ ಗಡಿ ದಾಟದಿರೋದು ಮಾಲೀಕರ ಅಳಲಿಗೆ ಕಾರಣವಾಗಿದೆ. ಬರುವ ಹಣ ನಿಸಿಮಾ ಮಂದಿರಗಳಲ್ಲಿ ಕೆಲಸ ಮಾಡುವ ಜನರಿಗೆ ಕೂಲಿ ನೀಡಲು ಸಾಲುವುದಿಲ್ಲ ಎಂದು ಸಿನಿಮಾ ಮಾಲೀಕರು ಕಂಗಾಲಾಗಿದ್ದಾರೆ‌.

ಬೇಡಿಕೆ ಇಡೇರಿಕೆ ಮುಂದಾಗದ ಸರ್ಕಾರ:

ಏಕ ಮುಖ ಪರದೆ ಚಿತ್ರ ಮಂದಿರಗಳಿಗೆ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ನೀಡುವಂತೆ ಸಿನಿಮಾ ಮಂದಿರಗಳಿಗೆ ಭೀಗ ಹಾಕಿದರು. ಆದ್ರೂ ಸರ್ಕಾರ ಮಾತ್ರ ಬೇಡಿಕೆ ಈಡೇರಿಸಲು ಮುಂದಾಗುತ್ತಿಲ್ಲ ಎಂಬುದು ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ.

ದುಬಾರಿಯಾದ ನಿರ್ವಹಣೆ ವೆಚ್ಚ:

ಕೊರೊನಾ ತಡೆಗೆ ನಿರ್ದೇಶನ ಪಾಲನೆಯೊಂದಿಗೆ ವಿಜಯಪುರ ನಗರದಲ್ಲಿ ಎರಡು ಚಿತ್ರ ಮಂದಿರಗಳು ಪುನರಾರಂಭಗೊಂಡಿವೆ. ಆದ್ರೆ ಸ್ಯಾನಿಟೈಸರ್ ಸಿಂಪಡಣೆ, ವಿದ್ಯುತ್ ದರ ಏರಿಕೆಯಿಂದ ದುಬಾರಿ ಖರ್ಚು ಮಾಡಬೇಕಾದ ಅನಿವಾರ್ಯ ಉಂಟಾಗಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಪ್ರದರ್ಶನಗೊಳ್ಳುತ್ತಿರುವ ಚಿತ್ರಗಳು ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿವೆ. ಹೀಗಾಗಿ ಹೊಸ ಚಲನಚಿತ್ರ ಬಿಡುಗಡೆ ನಿರೀಕ್ಷೆಯಲ್ಲಿ ಸಿನಿ ಪ್ರಿಯರಿದ್ದಾರೆ ಎಂದು ಸಿನಿಮಾ ಮಂದಿರಗಳ ಮಾಲೀಕರ ಮಾತಾಗಿದೆ.

ABOUT THE AUTHOR

...view details