ವಿಜಯಪುರ: ಕಳೆದ ನಾಲ್ಕೈದು ದಿನಗಳಿಂದ ಬಿರುಗಾಳಿ ಸಹಿತ ಭಾರಿ ಮಳೆ ಸುರಿದ ಪರಿಣಾಮ ಇಂಡಿ ತಾಲೂಕಿನ ಮಾರ್ಸನಹಳ್ಳಿಯ ಸಚಿನ್ ಹಿರೇಮಠ ಎಂಬುವರು 2 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಪಪ್ಪಾಯ ಗಿಡಗಳು ಸಂಪೂರ್ಣ ನಾಶವಾಗಿವೆ.
ಮಾರ್ಸನಹಳ್ಳಿಯ ಸಚಿನ್ ಹಿರೇಮಠ ಎಂಬುವರು 2 ಎಕರೆ ಪ್ರದೇಶದಲ್ಲಿ ಪಪ್ಪಾಯ ಗಿಡಗಳನ್ನು ಬೆಳೆಸಿದ್ದರು. ಕಳೆದ ನಾಲ್ಕೈದು ದಿನಗಳಿಂದ ಬಿರುಗಾಳಿ ಸಹಿತ ಧಾರಾಕಾರ ಮಳೆಯಾದ ಕಾರಣ ಪಪ್ಪಾಯ ಗಿಡಗಳು ನೆಲಕಚ್ಚಿವೆ. ಈಗಾಗಲೇ ಸಾಕಷ್ಟು ಕಾಯಿಗಳನ್ನು ಬಿಟ್ಟು ಗಿಡಗಳು ಸಂಪೂರ್ಣ ನಾಶವಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.