ವಿಜಯಪುರ: ಕಲ್ಲಿನಿಂದ ಜಜ್ಜಿ ವ್ಯಕ್ತಿವೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಿಡಗುಂದಿ ಪಟ್ಟಣದ ವಿಜಯಲಕ್ಷ್ಮಿ ವೈನ್ ಶಾಪ್ ಬಳಿ ನಡೆದಿದೆ.
ಇಸ್ಪೀಟ್ ಆಟದಲ್ಲಿ ಗೆದ್ದ ಹಣಕ್ಕಾಗಿ ನಿಡಗುಂದಿಯಲ್ಲಿ ವ್ಯಕ್ತಿಯ ಬರ್ಬರ ಕೊಲೆ! - Man murdered near Vijayalakshmi wine shop in Nidagundi town
ಇಸ್ಪೀಟ್ ಆಟದಲ್ಲಿ ಹಣ ಗೆದ್ದಿದ್ದ ಕಾರಣಕ್ಕೆ ನಿಡಗುಂದಿ ಪಟ್ಟಣದ ನಿವಾಸಿ ತಿಪ್ಪಣ್ಣ ಗೊಂದಳಿ ಎಂಬಾತನ ಕೊಲೆ ಆಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
![ಇಸ್ಪೀಟ್ ಆಟದಲ್ಲಿ ಗೆದ್ದ ಹಣಕ್ಕಾಗಿ ನಿಡಗುಂದಿಯಲ್ಲಿ ವ್ಯಕ್ತಿಯ ಬರ್ಬರ ಕೊಲೆ! murder-in-vijayapura-for-money-won-in-the-game-of-ispit](https://etvbharatimages.akamaized.net/etvbharat/prod-images/768-512-9555608-thumbnail-3x2-sanju.jpg)
ಇಸ್ಪಿಟ್ ಆಟದಲ್ಲಿ ಗೆದ್ದ ಹಣಕ್ಕಾಗಿ ನಡೆಯಿತು ಕೊಲೆ.
ತಿಪ್ಪಣ್ಣ ಗೊಂದಳಿ (36) ಕೊಲೆಗೀಡಾಗಿರುವ ವ್ಯಕ್ತಿ. ನಿಡಗುಂದಿ ಪಟ್ಟಣದ ನಿವಾಸಿ ತಿಪ್ಪಣ್ಣ ನಿನ್ನೆ ರಾತ್ರಿ ಇಸ್ಪೀಟ್ ಆಟದಲ್ಲಿ ಹಣ ಗೆದ್ದಿದ್ದ ಎನ್ನಲಾಗ್ತಿದೆ. ಅದೇ ಹಣಕ್ಕಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಈ ಕುರಿತು ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.