ಮುದ್ದೇಬಿಹಾಳ:ಕೊರೊನಾ ವೈರಸ್ ವಿರುದ್ಧ ತಮ್ಮ ಜೀವ ಒತ್ತೆ ಇಟ್ಟು ಹೋರಾಟ ನಡೆಸುತ್ತಿರುವ ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸೇವೆಯನ್ನು ಕೊಂಡಾಡಿರುವ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ನಿನ್ನೆ ಅವರೆಲ್ಲರಿಗೂ ಸೆಲ್ಯೂಟ್ ಹೊಡೆದು ಕೈಮುಗಿದು ಅಭಿನಂದನೆ ಸಲ್ಲಿಸಿದರು.
ಕೊರೊನಾ ವಾರಿಯರ್ಸ್ಗೆ ಶಾಸಕರಿಂದ ಸೆಲ್ಯೂಟ್..... ಕುಟುಂಬಕ್ಕೆ ದಿನಸಿ ಕಿಟ್ ವಿತರಣೆ - ಮುದ್ದೇಬಿಹಾಳ ಲೆಟೆಸ್ಟ್ ನ್ಯೂಸ್
ಕೊರೊನಾ ವಿರುದ್ಧ ತಮ್ಮ ಜೀವದ ಹಂಗು ತೊರೆದು ಹೋರಾಟ ನಡೆಸುತ್ತಿರುಯವ ಪೊಲೀಸ್ ಹಾಗೂ ಆರೋಗ್ಯ ಇಲಾಖೆಗೆ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಕೈಮುಗಿದು ಅಭಿನಂದನೆ ಸಲ್ಲಿಸಿದರು. ಜೊತೆಗೆ ಆ ಕುಟುಂಬಗಳಿಗೆ ತಮ್ಮ ಸ್ವಂತ ಖರ್ಚಿನಿಂದ ದಿನಸಿ ತಲುಪಿಸುವುದಾಗಿ ಭರವಸೆ ನೀಡಿದರು.
![ಕೊರೊನಾ ವಾರಿಯರ್ಸ್ಗೆ ಶಾಸಕರಿಂದ ಸೆಲ್ಯೂಟ್..... ಕುಟುಂಬಕ್ಕೆ ದಿನಸಿ ಕಿಟ್ ವಿತರಣೆ MLA Nadahalli Salute to corona warriors](https://etvbharatimages.akamaized.net/etvbharat/prod-images/768-512-6890502-thumbnail-3x2-vjp.jpg)
ಕೊರೊನಾ ವಾರಿಯರ್ಸ್ಗೆ ಶಾಸಕರಿಂದ ಸೆಲ್ಯೂಟ್.....ಕುಟುಂಬಕ್ಕೆ ದಿನಸಿ ಕಿಟ್ ವಿತರಣೆ
ಸಂಕಷ್ಟದ ಸಮಯದಲ್ಲಿ ಜೀವದ ಹಂಗು ತೊರೆದು ಹೋರಾಡುತ್ತಿರುವ ನಿಮ್ಮ ಬೆನ್ನಿಗೆ ನಾನಿದ್ದೇನೆ. ಯಾವುದಕ್ಕೂ ಜಗ್ಗದೇ ನಮ್ಮ ತಾಲೂಕಿಗೆ ವೈರಸ್ ಬಾರದಂತೆ ನೋಡಿಕೊಳ್ಳಬೇಕು. ಮತಕ್ಷೇತ್ರದಲ್ಲಿರುವ ಜನರ ಆರೋಗ್ಯವನ್ನು ಕಾಪಾಡುವ ಆಶಾ, ಆರೋಗ್ಯ, ಪೊಲೀಸ್, ಪೌರಕಾರ್ಮಿಕರ ಕುಟುಂಬಕ್ಕೆ ದಿನಸಿಯನ್ನು ತಮ್ಮ ಸ್ವಂತ ಖರ್ಚಿನಿಂದ ತಲುಪಿಸುವುದಾಗಿ ಹೇಳಿದ ಶಾಸಕರು ಎಲ್ಲರಿಗೂ ಗುಣಮಟ್ಟದ ಮಾಸ್ಕ್ ಕೂಡಾ ನೀಡುತ್ತಿರುವುದಾಗಿ ತಿಳಿಸಿದರು.