ವಿಜಯಪುರ: ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಘಟನೆಯ ಬಗ್ಗೆ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಮಾಡಿದ್ದಾರೆ.
ದೇಶ ದ್ರೋಹಿಗಳ ಮೇಲೆ 'ದಂಡಂ...ದಶಗುಣಂ' ಪ್ರಯೋಗಿಸಿ: ಯತ್ನಾಳ್ - ಪಾದರಾಯನಪುರ ಘಟನೆಯ ಕುರಿತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಟ್ವೀಟ್
ಬೆಂಗಳೂರಿನ ಪಾದರಾಯನಪುರ ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಮುಖ್ಯಮಂತ್ರಿಗಳೇ ದೇಶ ದ್ರೋಹಿಳ ಮೇಲೆ ಕ್ರಮ ಕೈಗೊಳ್ಳು ಯಾವುದೇ ಜನಪ್ರತಿನಿಧಿಗಳ ಅನುಮತಿ ಬೇಕಿಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಒತ್ತಾಯಿಸಿದ್ದಾರೆ.

ಪಾದರಾಯನಪುರ ಘಟನೆಯ ಕುರಿತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಟ್ವೀಟ್
ಮುಖ್ಯಮಂತ್ರಿಗಳೇ ದೇಶ ದ್ರೋಹಿಗಳನ್ನು ಹಾಗೂ ಕಾನೂನು ಮುರಿಯುವ ಗೂಂಡಾಗಳ ಮೇಲೆ ಕ್ರಮ ಕೈಗೊಳ್ಳಲು ಯಾವುದೇ ಜನಪ್ರತಿನಿಧಿಗಳ ಅನುಮತಿ ಬೇಕಿಲ್ಲ. ಅಂತಹ ಶಾಸಕರ ವಿರುದ್ಧ ಎನ್ಎಸ್ಎ ಅಡಿ ಕೇಸ್ ದಾಖಲಿಸಿ, ಮೃದು ಧೋರಣೆ ಸರಿಯಲ್ಲ. ಅಂಥವರ ಜೊತೆ ಮಾತುಕತೆ ನಿಲ್ಲಿಸಿ ಮುಳ್ಳನ್ನು ಮುಳ್ಳಿನಿಂದ ತೆಗೆಯಬೇಕು. ದಂಡಂ ದಶಗುಣಂ ಇಲ್ಲದಿದ್ದರೆ….. ಎಂದು ಟ್ವೀಟ್ ಮಾಡಿದ್ದಾರೆ.