ಕರ್ನಾಟಕ

karnataka

ETV Bharat / state

5ನೇ ದಿನವೂ ಮಹಾರಾಷ್ಟ್ರದಿಂದ ವಿಜಯಪುರಕ್ಕೆ ಬಂದ ವಲಸೆ ಕಾರ್ಮಿಕರು - 145 Members came to vijayapura

ಲಾಕ್​ಡೌನ್ ಸಡಿಲಿಕೆ ಮಾಡುತ್ತಿದ್ದಂತೆ ಭಾರತದ ಎಲ್ಲೆಡೆಯಿಂದ ವಲಸೆ ಕಾರ್ಮಿಕರು ಕರ್ನಾಟಕಕ್ಕೆ ವಾಪಸ್ ಬರುತ್ತಿದ್ದಾರೆ. ಮಹಾರಾಷ್ಟ್ರದಿಂದ ಕೂಡಾ ವಲಸೆ ಕಾರ್ಮಿಕರು ರಾಜ್ಯಕ್ಕೆ ಬರುತ್ತಿದ್ದಾರೆ. ಇಂದೂ ಕೂಡಾ ಮಹಾರಾಷ್ಟ್ರದಿಂದ ವಿಜಯಪುರಕ್ಕೆ 145 ವಲಸೆ ಕಾರ್ಮಿಕರು ಆಗಮಿಸಿದ್ದಾರೆ.

Migrant workers
ವಿಜಯಪುರಕ್ಕೆ ಬಂದ ವಲಸೆ ಕಾರ್ಮಿಕರು

By

Published : Jun 6, 2020, 12:05 PM IST

ವಿಜಯಪುರ:ಸತತ ಐದನೇ ದಿನವೂ ಮುಂಬೈ-ಗದಗ ಎಕ್ಸ್​​​​​​​​​​​​​​​​​ಪ್ರೆಸ್ ರೈಲು ಮೂಲಕ ವಲಸೆ ಕಾರ್ಮಿಕರು ವಿಜಯಪುರಕ್ಕೆ ಬಂದಿಳಿದಿದ್ದಾರೆ. ಬೆಳಗ್ಗೆ ಮಹಾರಾಷ್ಟ್ರದಿಂದ ರೈಲಿನಲ್ಲಿ ವಿಜಯಪುರ ಜಿಲ್ಲೆಯ ವಿವಿಧ ತಾಲೂಕಿನ 145 ವಲಸೆ ಕಾರ್ಮಿಕರು ಕೇಂದ್ರ ರೈಲು ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ಮಹಾರಾಷ್ಟ್ರದಿಂದ ವಿಜಯಪುರಕ್ಕೆ ಬಂದ ವಲಸೆ ಕಾರ್ಮಿಕರು

ಪ್ರಯಾಣಿಕರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಸ್ಕ್ರೀನಿಂಗ್ ಟೆಸ್ಟ್​​​​​​​ಗೆ ಒಳಪಡಿಸಿದರು. ನಂತರ ಅವರನ್ನು ಜಿಲ್ಲೆಯ ವಿವಿಧ ತಾಲೂಕಿನ ಕ್ವಾರಂಟೈನ್​​​​​​​​​​​ ಕೇಂದ್ರಗಳಿಗೆ ಕೆಎಸ್​​​​​​​​​​​ಆರ್​​​​​​​​​​​​ಟಿಸಿ ಬಸ್​​​ಗಳ ಮೂಲಕ ಕಳಿಸಿಕೊಡಲಾಯ್ತು. ಕ್ವಾರಂಟೈನ್ ವೇಳೆ ಕೊರೊನಾ ಲಕ್ಷಣ ಕಂಡು ಬಂದರೆ ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಲಿದ್ದು, ಅದರ ವರದಿ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.

ಮುಂಬೈ-ಗದಗ ಎಕ್ಸ್​​​​​​​​​​​​​ಪ್ರೆಸ್ ರೈಲು ಆರಂಭಗೊಂಡ ಮೊದಲ ದಿನ 212 ಕಾರ್ಮಿಕರು ವಿಜಯಪುರಕ್ಕೆ ಆಗಮಿಸಿದ್ದರು. ಎರಡನೇ ದಿನ 147 ಕಾರ್ಮಿಕರು ಬಂದಿದ್ದರು. ಮೂರನೇ ದಿನ 107 ಜನರು, ನಾಲ್ಕನೇ ದಿನ 100ಕ್ಕೂ ಹೆಚ್ಚು ಜನ ಆಗಮಿಸಿದ್ದರು. ಇದುವರೆಗೂ 700ಕ್ಕೂ ಹೆಚ್ಚು ಜನರು ಮಹಾರಾಷ್ಟ್ರದಿಂದ ಆಗಮಿಸಿದ್ದು ಇವರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ.

ABOUT THE AUTHOR

...view details