ಕರ್ನಾಟಕ

karnataka

ETV Bharat / state

ಉಪನ್ಯಾಸಕ ಡಾ.ಆರ್.ಸಿ.ಗೂಳಿ ಕೋವಿಡ್​ಗೆ ಬಲಿ - ಡಾ. ಆರ್.ಸಿ. ಗೂಳಿ ಸಾವು

ವಾಗ್ಮಿ, ನಿರೂಪಕರೂ ಆಗಿದ್ದ ಮುದ್ದೇಬಿಹಾಳದ ಉಪನ್ಯಾಸಕ ಡಾ.ರಾಘವೇಂದ್ರ ಸಿ.ಗೂಳಿ ಕೋವಿಡ್​ನಿಂದ ಮೃತಪಟ್ಟಿದ್ದಾರೆ.

Lecturer Dr. R.C.Gooli died due to Covid
ಉಪನ್ಯಾಸಕ ಡಾ. ಆರ್.ಸಿ. ಗೂಳಿ ಕೋವಿಡ್​ಗೆ ಬಲಿ

By

Published : May 26, 2021, 8:29 AM IST

ಮುದ್ದೇಬಿಹಾಳ: ತಾಲೂಕಿನ ನಾಲತವಾಡ ಪಟ್ಟಣದ ವೀರೇಶ್ವರ ಮಹಾವಿದ್ಯಾಲಯದ ಉಪನ್ಯಾಸಕ ಡಾ.ರಾಘವೇಂದ್ರ ಸಿ.ಗೂಳಿ ಕೋವಿಡ್ ಸೋಂಕಿನಿಂದ ಕೊನೆಯುಸಿರೆಳೆದಿದ್ದಾರೆ.

ತಾಲೂಕಿನ ಆಲೂರ ಗ್ರಾಮದ ನಿವಾಸಿಯಾಗಿರುವ ಡಾ.ಗೂಳಿ ಅವರು, ಉತ್ತಮ ವಾಗ್ಮಿ, ನಿರೂಪಕರೂ ಆಗಿದ್ದರು. ಬಿಎಡ್ ಕಾಲೇಜು ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಇವರಿಗೆ ಕರ್ನಾಟಕ ವಿವಿ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಶಿಷ್ಯ ವರ್ಗವನ್ನು ಇವರು ಅಗಲಿದ್ದಾರೆ.

ಇದನ್ನೂಓದಿ : ಕ್ರೂರಿ ಅಟ್ಟಹಾಸಕ್ಕೆ ಹೆಂಡ್ತಿ ಮಾತ್ರವಲ್ಲ, ಆಸರೆಗೆ ಇದ್ದ ಎಕರೆ ಜಮೀನು ಹೋಯ್ತು!

ಡಾ. ಗೂಳಿ ಅವರು ಆಲೂರ ಗ್ರಾಮದಲ್ಲಿ ಜ್ಞಾನ ಕಣಜ ಪೂರ್ವ ಪ್ರಾಥಮಿಕ ಶಾಲೆ ತೆರೆದು ಅದರ ಮಾರ್ಗದರ್ಶಕರಾಗಿದ್ದರು. ನಾಲತವಾಡದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿರೂಪಕರಾಗಿ, ಆಲೂರ ಗ್ರಾಮದಲ್ಲಿ ಬಹುದೊಡ್ಡ ಮಟ್ಟದಲ್ಲಿ ಗುರುವಂದನೆ ಕಾರ್ಯಕ್ರಮ ನಡೆಸುವ ಮೂಲಕ ಸಂಘಟನಕಾರರು ಎಂದು ಗುರುತಿಸಿಕೊಂಡಿದ್ದರು.

ABOUT THE AUTHOR

...view details