ವಿಜಯಪುರ: ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿಗೆ ಮತಯಾಚನೆ ವೇಳೆ ವಕೀಲನೋರ್ವ ಫುಲ್ ಕ್ಲಾಸ್ ತೆಗೆದುಕೊಂಡ ಘಟನೆ ನಗರದ ಜಿಲ್ಲಾ ನ್ಯಾಯವಾದಿಗಳ ಸಂಘದ ಸಭಾಭವನದಲ್ಲಿ ನಡೆದಿದೆ.
ಮತಯಾಚನೆ ವೇಳೆ ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿಗೆ ವಕೀಲನಿಂದ ಫುಲ್ ಕ್ಲಾಸ್ - undefined
ಮತ ಯಾಚಿಸಲು ರಮೇಶ್ ಜಿಗಜಿಣಗಿ ಆಗಮಿಸಿದ್ದರು, ಈ ವೇಳೆ ಅವರ ಮೇಲೆ ವಕೀಲನೋರ್ವ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಎರಡು ಬಾರಿ ಸಂಸದರಾದ ನೀವು ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಕೇಂದ್ರ ಸಚಿವ ಜಿಗಜಿಣಗಿ ತಬ್ಬಿಬ್ಬಾಗಿದ್ದಾರೆ.

ರಮೇಶ ಜಿಗಜಿಣಗಿಗೆ ವಕೀಲರು ಫುಲ್ ಕ್ಲಾಸ್
ಮತಯಾಚನೆ ವೇಳೆ ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿಗೆ ವಕೀಲನಿಂದ ಫುಲ್ ಕ್ಲಾಸ್
ನ್ಯಾಯವಾದಿಗಳ ಸಭಾ ಭವನದಲ್ಲಿ ಮತಯಾಚಿಸಲು ರಮೇಶ್ ಜಿಗಜಿಣಗಿ ಆಗಮಿಸಿದ್ದರು. ಈ ವೇಳೆ ಅವರ ಮೇಲೆ ವಕೀಲರು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಎರಡು ಬಾರಿ ಸಂಸದರಾದ ನೀವು ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದ್ದೀರಿ ಎಂದು ವಕೀಲ ತಿಪ್ಪಣ್ಣ ದೊಡ್ಡಮನಿ ಪ್ರಶ್ನಿಸಿದ್ದಾರೆ.
ತಿಪ್ಪಣ್ಣರನ್ನ ಇತರೆ ವಕೀಲರು ಸಮಾಧಾನಪಡಿಸಲು ಮುಂದಾಗಿ ನಂತರ ಅವರನ್ನು ಸಭಾ ಭವನದಿಂದ ಹೊರಗೆ ಕರೆದೊಯ್ದರು. ಈ ವೇಳೆ ಮುಜುಗರಕ್ಕೀಡಾದ ರಮೇಶ್ ಜಿಗಜಿಣಗಿ, ಸ್ಥಳದಿಂದ ಕಾಲ್ಕಿತ್ತರು.