ಕರ್ನಾಟಕ

karnataka

By

Published : Dec 27, 2019, 10:15 AM IST

ETV Bharat / state

ಗ್ರಹಣದ ದಿನ ವಿಕಲ ಚೇತನನನ್ನು ತಿಪ್ಪೆಯಲ್ಲಿ ಹೂತಿಟ್ಟ ಪ್ರಕರಣ: ಯುವಕನ ತಂದೆ ಪೊಲೀಸ್​ ವಶಕ್ಕೆ

ಅಂಗವೈಕಲ್ಯದಿಂದ ಬಳಲುತ್ತಿದ್ದ ವಿಕಲಚೇತನ ಮಕ್ಕಳನ್ನು ತಿಪ್ಪೆಯಲ್ಲಿ ಹೂತಿಟ್ಟರೆ ಸಮಸ್ಯೆ ದೂರವಾಗುತ್ತೆ ಎಂದು ಮೌಢ್ಯತೆ ಮೆರೆದಿದ್ದ ಪೋಷಕರ ವಿರುದ್ಧ ಪ್ರಕರಣ ದಾಖಲಾಗಿದೆ.

kids-buried-in-dirt-to-cure-disabilities
kids-buried-in-dirt-to-cure-disabilities

ವಿಜಯಪುರ:ಗುರುವಾರ ಸಂಭವಿಸಿದ್ದ ಕಂಕಣ ಸೂರ್ಯಗ್ರಹಣದ ಸಂದರ್ಭದಲ್ಲಿ ತಿಪ್ಪೆಯಲ್ಲಿ ಕುತ್ತಿಗೆವರೆಗೂ ವಿಕಲಚೇತನ ಮಗನನ್ನು ಹೂತಿಟ್ಟಿದ್ದ ತಂದೆ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ..ಗ್ರಹಣದ ದಿನ ಅಂಗವಿಕಲತೆ ನಿವಾರಣೆಗೆ ತಿಪ್ಪೆಯಲ್ಲಿ ಮಕ್ಕಳನ್ನು ಹೂತಿಟ್ಟ ಪೋಷಕರು!

ಜಿಲ್ಲೆಯ ಇಂಡಿ ತಾಲೂಕಿನ ಅರ್ಜುಣಗಿ ಗ್ರಾಮದಲ್ಲಿ 22 ವರ್ಷದ ಪಪ್ಪು ಕುತುಬುದ್ದೀನ್ ಮುಲ್ಲಾ ಎಂಬ ಯುವಕನನ್ನು ಕುತ್ತಿಗೆವರೆಗೂ ತಿಪ್ಪೆಯಲ್ಲಿ ಹೂಳಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 336, 342, 508 ಅಡಿಯಲ್ಲಿ‌ ಪ್ರಕರಣ ದಾಖಲಾಗಿದೆ.

ಯುವಕನ ತಂದೆ ಬಾಬು ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ABOUT THE AUTHOR

...view details