ವಿಜಯಪುರ:ಆಯುರ್ವೇದ ಪಾಂಡಿತ್ಯಕ್ಕೆ ಹೆಸರುವಾಸಿಯಾಗಿದ್ದ 105 ವರ್ಷದ ಶತಾಯುಷಿ ಕನ್ನೊಳ್ಳಿ ಹಿರೇಮಠ ಸ್ವಾಮೀಜಿ ಇಂದು ಬೆಳಗಿನ ಜಾವ ಲಿಂಗೈಕ್ಯರಾಗಿದ್ದಾರೆ.
ವಿಜಯಪುರ: ಶತಾಯುಷಿ ಕನ್ನೊಳ್ಳಿ ಹಿರೇಮಠ ಸ್ವಾಮೀಜಿ ಲಿಂಗೈಕ್ಯ - ಕನ್ನೊಳ್ಳಿ ಹಿರೇಮಠದ ಮರುಳಾರಾದ್ಯ ಶಿವಾಚಾರ್ಯ ಸ್ವಾಮೀಜಿ
ಆಯುರ್ವೇದ ಪಾಂಡಿತ್ಯಕ್ಕೆ ಹೆಸರುವಾಸಿಯಾಗಿದ್ದ 105 ವರ್ಷದ ಶತಾಯುಷಿ ಕನ್ನೊಳ್ಳಿ ಹಿರೇಮಠ ಸ್ವಾಮೀಜಿ ಇಂದು ಬೆಳಗಿನ ಜಾವ ಲಿಂಗೈಕ್ಯರಾಗಿದ್ದಾರೆ.
![ವಿಜಯಪುರ: ಶತಾಯುಷಿ ಕನ್ನೊಳ್ಳಿ ಹಿರೇಮಠ ಸ್ವಾಮೀಜಿ ಲಿಂಗೈಕ್ಯ kannolli hiremath swamiji died in vijayapura](https://etvbharatimages.akamaized.net/etvbharat/prod-images/768-512-6099564-thumbnail-3x2-sanju.jpg)
ಶತಾಯುಷಿ ಕನ್ನೊಳ್ಳಿ ಹಿರೇಮಠ ಸ್ವಾಮೀಜಿ ಲಿಂಗೈಕ್ಯ
ಶತಾಯುಷಿ ಕನ್ನೊಳ್ಳಿ ಹಿರೇಮಠ ಸ್ವಾಮೀಜಿ ಲಿಂಗೈಕ್ಯ
ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿ ಹಿರೇಮಠದ ಮರುಳಾರಾದ್ಯ ಶಿವಾಚಾರ್ಯ ಸ್ವಾಮೀಜಿ ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದರು. ಹಲವು ಪವಾಡಗಳ ಮೂಲಕ ಪ್ರಸಿದ್ಧಿ ಹೊಂದಿದ್ದ ಸ್ವಾಮೀಜಿ ನಡೆದಾಡುವ ದೇವರು,ಧನ್ವಂತರಿ ಎಂದು ಈ ಭಾಗದಲ್ಲಿ ಕೀರ್ತಿ ಹೊಂದಿದ್ದರು.
1915ರಲ್ಲಿ ಜನಸಿದ್ದ ಮರುಳಾರಾದ್ಯ ಶಿವಾಚಾರ್ಯ ಶ್ರೀಗಳು 1933 ರಲ್ಲಿ ಕನ್ನೋಳಿ ಹಿರೇಮಠದ ಪಟ್ಟಾಧಿಕಾರ ಸ್ವೀಕರಿಸಿದ್ದರು. ಬೆಳಗಿನ ಜಾವ ಲಿಂಗ ಪೂಜೆ ವೇಳೆಯಲ್ಲಿ ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ. ಇವರು ಉತ್ತರ ಕರ್ನಾಟಕದಲ್ಲಿ ಅಪಾರ ಭಕ್ತ ಸಮೂಹ ಹೊಂದಿದ್ದರು.