ಕರ್ನಾಟಕ

karnataka

ETV Bharat / state

ಬಾಲಶಿವಯೋಗಿಯಿಂದ ಹಸಿರು ಜೋಳಿಗೆ: ಭಕ್ತರ ಮನೆಗೆ ಸಸಿ ಕೊಟ್ಟು ವಿನೂತನ ಪರಿಸರ ಜಾಗೃತಿ - ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು

ಐತಿಹಾಸಿಕ ಕೋಟೆ ನಗರಿಯಲ್ಲಿ ಗಿಡಮರಗಳು ಹೆಚ್ಚಿಗೆ ಕಾಣಬೇಕು, ಪಟ್ಟಣವು ಸಂಪೂರ್ಣ ಹಸಿರೀಕರಣಗೊಳ್ಳಬೇಕೆಂಬ ಆಲೋಚನೆಯೊಂದಿಗೆ ಸಿದ್ದಲಿಂಗ ಶ್ರೀಗಳು ಸದ್ಯ ಎರಡು ಸಾವಿರ ಸಸಿಗಳನ್ನು ಶ್ರೀಮಠದಿಂದ ಭಕ್ತರ ಮನೆ ಮನೆಗೆ ನೀಡುವಂತಹ ಕಾರ್ಯಕ್ಕೆ ಮುಂದಾಗಿದ್ದಾರೆ.

Innovative Environmental Awareness Program By the Bala Shivayogi Siddhalinga devru
ಬಾಲಶಿವಯೋಗಿಯಿಂದ ಹಸಿರು ಜೋಳಿಗೆ

By

Published : Jun 28, 2021, 9:22 AM IST

ಮುದ್ದೇಬಿಹಾಳ: ಲಾಕ್‌ಡೌನ್ ಸಮಯದಲ್ಲಿ ಹಸಿದವರಿಗೆ ಮನೆ ಮನೆಗೆ ತೆರಳಿ ಅನ್ನದಾಸೋಹ ಕಾರ್ಯ ಕೈಗೊಂಡ ತಾಳಿಕೋಟಿಯ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಸಿದ್ದಲಿಂಗ ದೇವರು, ಹಸಿರು ಜೋಳಿಗೆಯ ಮೂಲಕ ತಾವೇ ಮನೆ ಮನೆಗಳಿಗೆ ತೆರಳಿ ಸಸಿ ಕೊಟ್ಟು ವಿನೂತನ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ.

ಬಾಲಶಿವಯೋಗಿಯಿಂದ ಹಸಿರು ಜೋಳಿಗೆ

ಭಕ್ತರ ಪಾಲಿನ ಸಂಜೀವಿನಿ ಎಂದು ಹೆಸರಾಗಿರುವ ಸಿದ್ದಲಿಂಗ ದೇವರು ಕೊರೊನಾ ವೇಳೆ ಸಂಕಷ್ಟದಲ್ಲಿದ್ದ ಸುಮಾರು 22 ಸಾವಿರ ಕುಟುಂಬಗಳಿಗೆ ಮಠದಿಂದ ಪ್ರಸಾದದ ರೂಪದಲ್ಲಿ ದಿನಸಿ ಕಿಟ್‌ಗಳನ್ನು ನೀಡಿದ್ದರು. ಈ ಮೂಲಕ ಸಂಕಷ್ಟದಲ್ಲಿದ್ದ ಭಕ್ತರ ಹಸಿವು ನೀಗಿಸುವಂತಹ ಕಾರ್ಯ ಮಾಡಿದ್ದರು.

ಐತಿಹಾಸಿಕ ಕೋಟೆ ನಗರಿ ತಾಳಿಕೋಟೆಯಲ್ಲಿ ಗಿಡಮರಗಳು ಹೆಚ್ಚಿಗೆ ಕಾಣಬೇಕು, ಪಟ್ಟಣ ಸಂಪೂರ್ಣ ಹಸಿರೀಕರಣಗೊಳ್ಳಬೇಕೆಂಬ ಆಲೋಚನೆಯೊಂದಿಗೆ ಸಿದ್ದಲಿಂಗ ಶ್ರೀಗಳು ಸದ್ಯ ಎರಡು ಸಾವಿರ ಸಸಿಗಳನ್ನು ಶ್ರೀಮಠದಿಂದ ಭಕ್ತರ ಮನೆ ಮನೆಗೆ ನೀಡುವಂತಹ ಕಾರ್ಯಕ್ಕೆ ಮುಂದಾಗಿದ್ದಾರೆ. ಮಠದಿಂದ ಶ್ರೀಗಳು ಕೈಗೊಂಡಿರುವ ಈ ವೃಕ್ಷ ಅಭಿಯಾನಕ್ಕೆ ನೂರಾರು ಯುವಕರು ಕೂಡಾ ಕೈಜೋಡಿಸಿದ್ದಾರೆ.

ಶ್ರೀಗಳ ಕಾರ್ಯಕ್ಕೆ ಪುರಸಭೆ ಸದಸ್ಯನ ಸಾಥ್:

ಬಾಲಶಿವಯೋಗಿ ಸಿದ್ದಲಿಂಗಶ್ರೀಗಳು ಕಟ್ಟಿಕೊಂಡಿರುವ ಹಸಿರು ಜೋಳಿಗೆ ವಿನೂತನ ಕಾರ್ಯಕ್ಕೆ ಪುರಸಭಾ ಸದಸ್ಯ ಜೈಸಿಂಗ್ ಮೂಲಿಮನಿ ತಮ್ಮ ಜನ್ಮದಿನದ ಅಂಗವಾಗಿ 2 ಸಾವಿರ ಸಸಿಗಳನ್ನು ಶ್ರೀಮಠಕ್ಕೆ ಅರ್ಪಿಸಿದ್ದಾರೆ. ಈ ಮೂಲಕ ಶ್ರೀಗಳು ಕೈಗೊಂಡ ಸಸಿ ನೀಡುವ ಕಾರ್ಯಕ್ಕೆ ಸಾಥ್ ನೀಡಿದ್ದಾರೆ.

ಮಠದಿಂದ ಮನೆ ಮನೆಗೆ ವಿತರಿಸಲಾಗುತ್ತಿರುವ ಸಸಿಗಳಲ್ಲಿ ಬೇವಿನ ಗಿಡ, ಕರಿಬೇವು, ಪೇರು, ರಾತ್ರಿಯಸಸಿ, ಮಾವು, ಬನ್ನಿ, ಆಲದ ಮರ, ದಾಸವಾಳ, ಕಣಗಲಿ, ಸೀತಾಫಲ, ನೇರಳೆ, ಬದಾಮ, ದುಂಡು ಮಲ್ಲಿಗೆ, ಜಾಜಿ ಮಲ್ಲಿಗೆ, ಹಳದಿಗಂಟಿ, ಬಟ್ಟಲ ಮಲ್ಲಿಗೆ, ಅರಳಿ ಗಿಡ, ಹುಣಸಿಗಿಡ, ನಿಂಬರಕಿ, ಬಿಲ್ವಪತ್ರಿ, ಚರಿ ಗಿಡ ಒಳಗೊಂಡು ಅನೇಕ ತಳಿಗಳ ಸಸಿಗಳನ್ನು ನೀಡುತ್ತಿದ್ದಾರೆ.

ಇದನ್ನೂ ಓದಿ: ವಿಶ್ವ ಪ್ರಸಿದ್ಧ ಜೋಗ, ಕುಪ್ಪಳ್ಳಿ ಇಂದಿನಿಂದ ಪ್ರವಾಸಿಗರ ವೀಕ್ಷಣೆಗೆ ಮುಕ್ತ

ABOUT THE AUTHOR

...view details