ಕರ್ನಾಟಕ

karnataka

ETV Bharat / state

ತಿನ್ನುವ ಪಡಿತರ ಅನ್ನಕ್ಕೂ ಕನ್ನ: ಅಕ್ರಮ ಪಡಿತರ ಸಾಗಿಸುತ್ತಿದ್ದ ಲಾರಿ ಜೊತೆಗೆ 502ಅಕ್ಕಿ ಚೀಲ ಜಪ್ತಿ - lorry seized in vijaypur

ಹೊರರಾಜ್ಯಗಳ ಕಾಳಸಂತೆಯಲ್ಲಿ ಮಾರಾಟ ಮಾಡಲು ಸರ್ಕಾರ ಕೊಡುವ ಪಡಿತರವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, 502ಅಕ್ಕಿ ಚೀಲಗಳನ್ನು ಜಪ್ತಿ ಮಾಡಿದ್ದಾರೆ.

illegal ration transporting lorry seized
ಪಡಿತರ ಅಕ್ಕಿ

By

Published : Mar 23, 2021, 10:05 AM IST

ವಿಜಯಪುರ: ಜಿಲ್ಲೆಯಿಂದ ಹೊರರಾಜ್ಯಕ್ಕೆ ಅಕ್ರಮವಾಗಿ ಪಡಿತರ ಅಕ್ಕಿಯನ್ನು ತೆಗೆದುಕೊಂಡು ಹೋಗಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಗ್ಯಾಂಗ್​ ಈಗ ಪೊಲೀಸ್ ಬಲೆಗೆ ಬಿದ್ದಿದೆ.

ಕಾಳಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಅನ್ನಭಾಗ್ಯ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಪಡಿತರ ಅಕ್ಕಿ‌ ಸಾಗಿಸುತ್ತಿದ್ದ ವಾಹನವನ್ನು ಜಿಲ್ಲೆಯ ಸಿಂದಗಿ ಪಟ್ಟಣದ ಕಲಕೇರಿ ಬೈಪಾಸ್ ಬಳಿ ಪೊಲೀಸರು ಸೀಜ್​ ಮಾಡಿದ್ದಾರೆ. ಮಹಾರಾಷ್ಟ್ರ ರಾಜ್ಯದ ನೋಂದಣಿ ಸಂಖ್ಯೆ ಹೊಂದಿದ್ದ ಲಾರಿಯಲ್ಲಿ 502ಅಕ್ಕಿ ಚೀಲಗಳನ್ನು ಸಾಗಿಸಲಾಗ್ತಿತ್ತು. ಈ ವೇಳೆ, 6.57ಲಕ್ಷ ರೂ. ಮೌಲ್ಯದ ಪಡಿತರ ಅಕ್ಕಿ ವಶಕ್ಕೆ ಪಡೆಯಲಾಗಿದೆ.

ಪಡಿತರ ಅಕ್ಕಿ ಅಕ್ರಮ ಸಾಗಣೆ

ಅಕ್ರಮವಾಗಿ ಅಕ್ಕಿ ಹೊರರಾಜ್ಯಕ್ಕೆ ಸಾಗಿಸುತ್ತಿರುವ ಕುರಿತು ಮಾಹಿತಿ ಕಲೆ ಹಾಕಿದ್ದ ಕಲಕೇರಿ ದಲಿತ ಸೇನಾ ತಾಲೂಕು ಘಟಕದ ಅಧ್ಯಕ್ಷ ಶಿವಾನಂದ ಆಲಮೇಲ ಹಾಗೂ ಅವರ ತಂಡ ಕಲಕೇರಿ ಬೈಪಾಸ್ ಬಳಿ ಲಾರಿ ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಪಡಿತರ ಅಕ್ಕಿ ಅಕ್ರಮ ಸಾಗಣೆ

ಪಡಿತರ ಅಕ್ಕಿಯನ್ನು ಅಕ್ರಮವಾಗಿ ಹೊರರಾಜ್ಯಕ್ಕೆ ಸಾಗಿಸುತ್ತಿರುವ ಕುರಿತು ಆಹಾರ ಇಲಾಖೆಯ ಆಹಾರ‌ ನಿರೀಕ್ಷಕ ಅಮಸಿದ್ದ ದಳವಾಯಿ ಸಿಂದಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ABOUT THE AUTHOR

...view details