ಕರ್ನಾಟಕ

karnataka

By

Published : Sep 3, 2022, 6:55 PM IST

ETV Bharat / state

ಪತ್ನಿಯ ಸಾವಿನ ಬೆನ್ನಲ್ಲೇ ಶತಾಯುಷಿ ಪತಿಗೆ ಹೃದಯಾಘಾತ: ಸಾವಿನಲ್ಲೂ ಒಂದಾದ ದಂಪತಿ

ಸಾವಿನಲ್ಲೂ ಒಂದಾದ ದಂಪತಿ. ಪತ್ನಿಯ ಸಾವಿನ ಸುದ್ದಿ ತಿಳಿದು ಶತಾಯುಷಿ ಪತಿ ಕೂಡ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

couple died on same day
ಸಾವಿನಲ್ಲೂ ಒಂದಾದ ದಂಪತಿ

ವಿಜಯಪುರ:ಇಲ್ಲಿ ಸಾವಿನಲ್ಲೂ ದಂಪತಿ ಒಂದಾಗಿದ್ದಾರೆ. ಜಿಲ್ಲೆಯ ತಿಕೋಟಾದಲ್ಲಿ ಪತ್ನಿಯ ಸಾವಿನ ಸುದ್ದಿ ತಿಳಿದು ಶತಾಯುಷಿ ಪತಿ ಕೂಡ ಮೃತಪಟ್ಟಿದ್ದಾರೆ. ದುಂಡವ್ವ ದೇವೇಂದ್ರ ವಳಸಂಗ(90) ಹಾಗೂ ಅವರ ಪತಿ ಶತಾಯುಷಿ ದೇವೇಂದ್ರ ಶಾಮರಾಯ ಒಳಸಂಗ (106) ಮೃತ ದಂಪತಿ.

ಪತ್ನಿಯ ಸಾವಿನ ಬೆನ್ನಲ್ಲೇ ಶತಾಯುಷಿ ಪತಿಗೆ ಹೃದಯಾಘಾತ: ದುಂಡವ್ವ ಕಳೆದ ಎರಡು ದಿನಗಳಿಂದ ಅಸ್ವಸ್ಥರಾಗಿದ್ದರು.‌ ಅವರನ್ನು ತಿಕೋಟಾ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು.‌ ನಂತರ ಅವರನ್ನು ಸೋಮದೇವರಹಟ್ಟಿ ವಸ್ತಿ ಮನೆಗೆ ತರಲಾಗಿತ್ತು.‌ ಆದರೆ ಇಂದು ದುಂಡವ್ವ ಸಾವನ್ನಪ್ಪಿದ್ದಾರೆ. ಈ ವಿಷಯ ತಿಳಿದ ಪತಿ ದೇವೇಂದ್ರ ಸಹ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.‌ ಗ್ರಾಮಸ್ಥರು ಆಗಮಿಸಿ ಸತಿ - ಪತಿಯ ಅಂತಿಮ‌ ದರ್ಶನ ಪಡೆದರು.‌ ಬಳಿಕ ಇಬ್ಬರನ್ನೂ ಒಟ್ಟಿಗೆ ಅಂತ್ಯಸಂಸ್ಕಾರ ಮಾಡಲಾಯಿತು.

ಇತ್ತೀಚಿಗೆ ಇವರ ಮಕ್ಕಳು, ಮೊಮ್ಮಕ್ಕಳು ಸೇರಿ ಬಂಗಾರದ ಹೂವು ಹಾರಿಸುವ ಸಂಪ್ರದಾಯ ನಡೆಸಿದ್ದರು. ದೇವೇಂದ್ರ ಹಾಗೂ ದುಂಡವ್ವ ಅವರಿಗೆ ಐದು ಜನ ಪುತ್ರರು, ಮೂವರು ಪುತ್ರಿಯರು, 24 ಜನ ಮೊಮ್ಮಕ್ಕಳು ಹಾಗೂ16 ಜನ ಮರಿ ಮೊಮ್ಮಕ್ಕಳು ಇದ್ದಾರೆ.

(ಇದನ್ನೂ ಓದಿ: ವಿದ್ಯುತ್ ಶಾಕ್​; ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಂಪಾಪತಿ ದಂಪತಿ ಸಾವು)

ABOUT THE AUTHOR

...view details