ಕರ್ನಾಟಕ

karnataka

ETV Bharat / state

ಅಡುಗೆ ಸಿಲಿಂಡರ್​ ಸ್ಪೋಟ .. ಚಡಚಣದಲ್ಲಿ ಅಪಾರ ಮೌಲ್ಯದ ಚಿನ್ನ, ದವಸ ಧಾನ್ಯಗಳು ಭಸ್ಮ - etv bharat

ತೋಟದ ಮನೆಯಲ್ಲಿ ಅಡುಗೆ ಸಿಲೆಂಡರ್ ಸ್ಪೋಟವಾಗಿ ಶೆಡ್​ನಲ್ಲಿದ್ದ 30 ಗ್ರಾಂ ಚಿನ್ನಾಭರಣ,  40,000 ನಗದು, 15 ಮೂಟೆ ಶೇಂಗಾ, 5 ಮೂಟೆ ಜೋಳ, 2 ಮೂಟೆ ಗೋಧಿ ಬೆಂಕಿಗಾಹುತಿಯಾಗಿರುವ ಘಟನೆ ಚಡಚಣ ತಾಲೂಕಿನ ಮರಗೂರು ಗ್ರಾಮದಲ್ಲಿ ನಡೆದಿದೆ.

ಅಡುಗೆ ಸಿಲಿಂಡರ್​ ಸ್ಪೋಟ

By

Published : Jun 3, 2019, 10:23 PM IST

ವಿಜಯಪುರ :ತೋಟದ ಮನೆಯಲ್ಲಿ ಅಡುಗೆ ಸಿಲೆಂಡರ್ ಸ್ಪೋಟವಾಗಿ ಲಕ್ಷಾಂತರ ಮೌಲ್ಯ ವಸ್ತುಗಳು ಸುಟ್ಟು ಭಸ್ಮವಾದ ಘಟನೆ ಚಡಚಣ ತಾಲೂಕಿನ ಮರಗೂರು ಗ್ರಾಮದಲ್ಲಿ ನಡೆದಿದೆ.

ಶೆಡ್​ನಲ್ಲಿದ್ದ 30 ಗ್ರಾಂ ಚಿನ್ನಾಭರಣ, 40,000 ನಗದು, 15 ಮೂಟೆ ಶೇಂಗಾ, 5 ಮೂಟೆ ಜೋಳ, 2 ಮೂಟೆ ಗೋಧಿ ಬೆಂಕಿಗಾಹುತಿಯಾಗಿವೆ. ಅಷ್ಟೇ ಅಲ್ಲದೇ ಪಕ್ಕದ ಗುಡಿಸಲಿಗೂ ಬೆಂಕಿ ವ್ಯಾಪಿಸಿದ್ದು, ಆ ಗುಡಿಸಲಿನಲ್ಲಿದ್ದ 15,000 ರೂ. ನಗದು, 5 ಗ್ರಾಂ ಚಿನ್ನ, ದವಸ ಧಾನ್ಯ ಭಸ್ಮವಾಗಿದೆ.

ಅಡುಗೆ ಸಿಲಿಂಡರ್​ ಸ್ಪೋಟ

ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಈ ಸಂಬಂಧ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details