ಕರ್ನಾಟಕ

karnataka

ನ್ಯಾಯಯುತ ಬೆಲೆ ಸಿಗದ ಹತಾಶೆಯಲ್ಲಿ 6 ಸಾವಿರ ಬಾಳೆಗಿಡ ನಾಶಗೊಳಿಸಿದ ರೈತ

By

Published : Jun 11, 2021, 7:18 AM IST

ಸಾಲ ಮಾಡಿ ಶ್ರಮವಹಿಸಿ ಬೆಳೆದ ಬೆಳೆ ಕೈಸೇರಿದರೂ ಮಾರುಕಟ್ಟೆಯಲ್ಲಿ ನ್ಯಾಯಯುತ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿಯಲ್ಲಿ ಅನ್ನದಾತರಿದ್ದು ಸೂಕ್ತ ಮಾರುಕಟ್ಟೆ ಕಲ್ಪಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

former-who-cut-down-banana-crop-for-not-getting-reasonable-price
ರೈತರಿಗೆ ನುಂಗಲಾರದ ತುತ್ತಾದ ಲಾಕ್‌ಡೌನ್

ಮುದ್ದೇಬಿಹಾಳ (ವಿಜಯಪುರ): ಕೊರೊನಾ ಮಹಾಮಾರಿ ಒಂದೆಡೆ ಜನರನ್ನು ಬಲಿ ಪಡೆಯುತ್ತಿದ್ದರೆ ಮತ್ತೊಂದೆಡೆ ವೈರಸ್ ಪ್ರಸರಣ ನಿಯಂತ್ರಣಕ್ಕೆ ಜಾರಿಗೊಳಿಸಿರುವ ಲಾಕ್‌ಡೌನ್ ಪರಿಣಾಮದಿಂದಲೂ ರೈತರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಅನ್ನದಾತ ಹೈರಾಣಾಗಿದ್ದಾನೆ. ಇದೀಗ ಮುದ್ದೇಬಿಹಾಳ ರೈತನೋರ್ವ ತನ್ನ ಜಮೀನಿನಲ್ಲಿ ಬೆಳೆದಿದ್ದ ಸುಮಾರು 6 ಸಾವಿರ ಬಾಳೆ ಗಿಡಗಳನ್ನು ನೆಲಸಮ ಮಾಡಿ ಹತಾಶೆ ವ್ಯಕ್ತಪಡಿಸಿದ್ದಾನೆ.

ತಾಲೂಕಿನ ನೇಬಗೇರಿ ಗ್ರಾಮದ ರೈತ ಮಹಿಳೆ ಸಂಗಮ್ಮ ಹಿರೇಮಠ ಎಂಬುವರು 5 ಎಕರೆ ಹೊಲದಲ್ಲಿ ಅಂದಾಜು ಆರು ಸಾವಿರ ಬಾಳೆ ಗಿಡಗಳನ್ನು ಬೆಳೆದಿದ್ದರು. ಪ್ರತಿ ಕೆ.ಜಿ 2-3 ರೂ.ನಂತೆಯೂ ಬಾಳೆ ಕೇಳುವವರಿಲ್ಲ. ಆದ್ರೆ ಕೂಲಿಗೆ ಬಂದವರಿಗೆ 200 ರೂಪಾಯಿ ಕೊಡಬೇಕಾಗುತ್ತದೆ. ಬಾಳೆ ಬೆಳೆಯನ್ನು ತೆಗೆಯಬೇಕಾದರೆ ಕೂಲಿಕಾರರಿಗೆ ಬೆಳೆ ಮಾರಿದ ಹಣಕ್ಕಿಂತ ದುಪ್ಪಟ್ಟು ಹಣ ನೀಡಬೇಕಿದೆ.

ಸೂಕ್ತ ಬೆಲೆ ಸಿಗದೆ ಬಾಳೆಗಿಡಗಳನ್ನು ನೆಲಸಮಗೊಳಿಸಿದ ರೈತ

ಫಸಲು ತೆಗೆಯದಿದ್ದರೆ ಬೆಳೆದ ಬೆಳೆ ಜಮೀನಿನಲ್ಲಿ ಕೊಳೆತು ಹೋಗುತ್ತಿದ್ದು ಮತ್ತೆ ಕೂಲಿಗಳನ್ನು ಕರೆಸಿ ಅದನ್ನು ತೆಗೆಯಬೇಕಾಗುತ್ತದೆ. ಹೀಗಾಗಿ, ಸೂಕ್ತ ಬೆಲೆ ದೊರೆಯದೇ ಮೇಲಿಂದ ಮೇಲೆ ಬೆಳೆನಾಶಕ್ಕೆ ಮುಂದಾಗುವ ಪರಿಸ್ಥಿತಿ ಎದುರಾಗಿದೆ. ಸರ್ಕಾರ ನಮ್ಮ ನೆರವಿಗೆ ಬರಬೇಕು ಎಂದು ರೈತರು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಭೂ ವಿವಾದ: ಸ್ಥಳ ಪರಿಶೀಲನೆಗೆ ಬಂದ ಪೊಲೀಸ್​ ವಾಹನದ ಗಾಜು ಪುಡಿಪುಡಿ

ABOUT THE AUTHOR

...view details