ಕರ್ನಾಟಕ

karnataka

ETV Bharat / state

ಬೇಜವಾಬ್ದಾರಿ ವರ್ತನೆ: ಐವರು ಪೊಲೀಸರು ಅಮಾನತು - ಪೊಲೀಸ್​ ಅಮಾನತು

ಕರ್ತವ್ಯ ಲೋಪದಡಿ ಹಾಗೂ ಬೇಜವಾಬ್ದಾರಿ ವರ್ತನೆ ಕಾರಣಕ್ಕೆ ನೂತನವಾಗಿ ಜಿಲ್ಲೆಗೆ ಆಗಮಿಸಿರುವ ಎಸ್​ಪಿ ಅವರು ಐವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

Five policemen suspended over Irresponsible behavior
ಬೇಜವಾಬ್ದಾರಿ ವರ್ತನೆ : ಐವರು ಪೊಲೀಸರು ಅಮಾನತು

By

Published : Aug 11, 2021, 10:09 PM IST

ವಿಜಯಪುರ: ಕರ್ತವ್ಯ ಲೋಪದಡಿ ಹಾಗೂ ಬೇಜವಾಬ್ದಾರಿ ವರ್ತನೆ ಹಿನ್ನೆಲೆ ಐವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ್​ ಆದೇಶಿಸಿದ್ದಾರೆ.

ಜಿಲ್ಲೆಯ ನಿಡಗುಂದಿ ಪೊಲೀಸ್ ಠಾಣೆಯ ಸಿಬ್ಬಂದಿ ಎಸ್.ಸಿ‌. ರೆಡ್ಡಿ, ಐ.ಜಿ.ಹೊಸಗೌಡರ ಹಾಗೂ ಬಸವನ ಬಾಗೇವಾಡಿ ಪೊಲೀಸ್​​ ಠಾಣೆಯ ಐ.ಎಂ.ಮಕಾಂದಾರ, ಆರ್.ಎಲ್.ರಾಠೋಡ್​ ಹಾಗೂ ಎಂ.ಎಲ್.ಯಾಳಗಿ ಅಮಾನತುಗೊಂಡ ಪೊಲೀಸ್ ಸಿಬ್ಬಂದಿ.

ಹೊಸದಾಗಿ ಜಿಲ್ಲಾ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ಪೊಲೀಸ್ ಇಲಾಖೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಈ ಹೆಜ್ಜೆ ಇಟ್ಟಿದ್ದಾರೆ ಎನ್ನಲಾಗಿದೆ. ಪೊಲೀಸರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ABOUT THE AUTHOR

...view details