ಕರ್ನಾಟಕ

karnataka

ETV Bharat / state

ಈಟಿವಿ ಭಾರತ ವರದಿಗೆ ಎಚ್ಚೆತ್ತ ಅಧಿಕಾರಿಗಳು: ವಿಜಯಪುರ ಎಪಿಎಂಸಿ ಮಾರುಕಟ್ಟೆ​ ಸ್ವಚ್ಛತೆ - ವಿಜಯಪುರ ಎಪಿಎಂಸಿ ಸುದ್ದಿ

ಸಾಂಕ್ರಾಮಿಕ ರೋಗಕ್ಕೆ ಎಡೆ ಮಾಡಿಕೊಡುತ್ತಿದೆಯಾ ಎಪಿಎಂಸಿ ತರಕಾರಿ ಮಾರುಕಟ್ಟೆ ಎಂದು ಸುದ್ದಿ ಬಿತ್ತರಿಸಿದ ಬೆನ್ನಲ್ಲೇ ಇಂದು ಬೆಳಗ್ಗೆಯಿಂದ ಹಿರಿಯ ಅಧಿಕಾರಿಗಳ ತಂಡ ಎಪಿಎಂಸಿ ತರಕಾರಿ ಮಾರುಕಟ್ಟೆ ಸ್ವಚ್ಛತೆಗೆ ಮುಂದಾಗಿದ್ದಾರೆ.

Vijayapura APMC market
Vijayapura APMC market

By

Published : Sep 14, 2020, 1:07 PM IST

Updated : Sep 14, 2020, 1:46 PM IST

ವಿಜಯಪುರ:ಎಪಿಎಂಸಿ ತರಕಾರಿ ಮಾರುಕಟ್ಟೆ ಮಳೆ ನೀರಿನಿಂದ ಕೊಳಚೆ, ಕೆಸರಿನಿಂದ ಕೂಡಿದ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಬರುವ ರೈತರಿಗೆ ಹಾಗೂ ವರ್ತಕರಿಗೆ ಸಾಂಕ್ರಾಮಿಕ ರೋಗ ಎದುರಾಗುತ್ತಿದೆ ಎಂದು ಈಟಿವಿ ಭಾರತ ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಮಾರುಕಟ್ಟೆ ಸ್ವಚ್ಛತೆಗೆ ಮುಂದಾಗಿದ್ದಾರೆ.

ಸಾಂಕ್ರಾಮಿಕ ರೋಗಕ್ಕೆ ಎಡೆ ಮಾಡಿಕೊಡುತ್ತಿದೆಯಾ ಎಪಿಎಂಸಿ ತರಕಾರಿ ಮಾರುಕಟ್ಟೆ ಎಂದು ಸುದ್ದಿ ಬಿತ್ತರಿಸಿದ ಬೆನ್ನಲ್ಲೇ ಬೆಳಗ್ಗೆಯಿಂದ ಹಿರಿಯ ಅಧಿಕಾರಿಗಳ ತಂಡ ತರಕಾರಿ ಮಾರುಕಟ್ಟೆ ಶುಚಿ ಕಾರ್ಯ ಮಾಡಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಮಳೆ ನೀರಿನಿಂದ ಕೂಡಿದ ಕೆಸರಿನ ಸ್ವಚ್ಛತೆಗೆ 6ಡಿ ದರ್ಜೆ ನೌಕಕರ ಮೂಲಕ ತೆರವಿಗೆ ಮುಂದಾಗಿದ್ದಾರೆ. ವರದಿ ಬಿತ್ತರಿಸಿದ 24 ಗಂಟೆಯೊಳಗೆ ಮಾರುಕಟ್ಟೆ ಸ್ವಚ್ಛತೆ ಮಾಡಲಾಗುತ್ತಿದೆ.‌

ಎಚ್ಚೆತ್ತ ಅಧಿಕಾರಿಗಳು: ವಿಜಯಪುರ ಎಪಿಎಂಸಿ ಮಾರುಕಟ್ಟೆ​ ಸ್ವಚ್ಛತೆ

ಇದನ್ನೂ ಓದಿ:ವಿಜಯಪುರ: ಮಳೆಯಿಂದಾಗಿ ಕೆಸರು ಗದ್ದೆಯಂತಾದ ಎಪಿಎಂಸಿ ಮಾರುಕಟ್ಟೆ

ಇತ್ತ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಜಂಟಿ ನಿರ್ದೇಶಕ ಕೆ ಎಂ ನಾಗೇಶ ನೇತೃತ್ವದ ಅಧಿಕಾರಿಗಳ ತಂಡ ಮಾರುಕಟ್ಟೆ ಒಳಚರಂಡಿ ವ್ಯವಸ್ಥೆ ಸುಧಾರಿಸಲು ಮುಂದಾಗಿದ್ದಾರೆ. ಬಳಿಕ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ ಜಂಟಿ ನಿರ್ದೇಶಕರು, ಕಳೆದ ಎರಡ್ಮೂರು ದಿನಗಳಿಂದ ಮಳೆಯ‌ ಪ್ರಭಾವದಿಂದ ಮಾರುಕಟ್ಟೆಯ ಯಾರ್ಡ್​ನಲ್ಲಿ ಮಳೆ ನೀರು ನಿಂತು ವ್ಯತ್ಯಯ ಕಾಣಿಕೊಂಡಿದ್ದರಿಂದ ಸ್ವಚ್ಛತೆಗೆ ಮುಂದಾಗಿದ್ದೇವೆ. ಒಳಚರಂಡಿ ನಿರ್ಮಿಸುವ ಮೂಲಕ ಶಾಶ್ವತ ಪರಿಹಾರ ಕಲ್ಪಿಸುತ್ತೇವೆ. ತಕ್ಷಣವೇ ಅಭಿವೃದ್ಧಿ ಕಾರ್ಯಕ್ಕೆ ಅಧಿಕಾರಿಗಳ ಸಭೆ ಕರೆಯುವುದಾಗಿ ಭರವಸೆ ನೀಡಿದ್ದಾರೆ.

Last Updated : Sep 14, 2020, 1:46 PM IST

ABOUT THE AUTHOR

...view details