ಮುದ್ದೇಬಿಹಾಳ (ವಿಜಯಪುರ):ಮದುವೆ ಸಮಾರಂಭದಲ್ಲಿ ಸಂಬಂಧಿಕರು, ಸ್ನೇಹಿತರು ವಿವಿಧ ಉಡುಗೊರೆಗಳನ್ನು ನವದಂಪತಿಗೆ ನೀಡುವುದು ಸಾಮಾನ್ಯ. ಆದರೆ ಇಲ್ಲೊಂದು ಜೋಡಿ ತಮ್ಮ ಮದುವೆಗೆ ಬಂದವರಿಗೆ ಸಸಿ ನೀಡುವ ಮೂಲಕ ವಿಶೇಷ ಪರಿಸರ ಕಾಳಜಿ ತೋರಿದ್ದಾರೆ.
ನವದಂಪತಿಯ ಪರಿಸರ ಪ್ರೀತಿ: ಹಾರೈಸಲು ಬಂದ ಅತಿಥಿಗಳಿಗೆ ಸಸಿ ಗಿಫ್ಟ್ - Environmental love of newsly married couple
ವಿಜಯಪುರದ ಮುದ್ದೇಬಿಹಾಳ ತಾಲೂಕಿನ ನವದಂಪತಿ ತಮ್ಮ ಮದುವೆಗೆ ಬಂದವರಿಗೆ ಸಸಿ ನೀಡುವ ಮೂಲಕ ವಿಶೇಷ ಪರಿಸರ ಕಾಳಜಿ ತೋರಿದ್ದಾರೆ.
![ನವದಂಪತಿಯ ಪರಿಸರ ಪ್ರೀತಿ: ಹಾರೈಸಲು ಬಂದ ಅತಿಥಿಗಳಿಗೆ ಸಸಿ ಗಿಫ್ಟ್ ನವದಂಪತಿಯ ವಿನೂತನ ಪರಿಸರ ಪ್ರೀತಿ](https://etvbharatimages.akamaized.net/etvbharat/prod-images/768-512-7625159-906-7625159-1592215877486.jpg)
ನವದಂಪತಿಯ ವಿನೂತನ ಪರಿಸರ ಪ್ರೀತಿ
ನವದಂಪತಿಯ ಪರಿಸರ ಪ್ರೀತಿ
ಮುದ್ದೇಬಿಹಾಳ ತಾಲೂಕಿನ ಸರೂರ ಗ್ರಾಮದ ಗಿರೀಶ್ ಗೌಡ ಪಾಟೀಲ್ ಅವರ ವಿವಾಹ, ಬಾಗಲಕೋಟೆ ಜಿಲ್ಲೆ ಭಗವತಿಯ ಲಕ್ಷ್ಮಿ ಅವರೊಂದಿಗೆ ಸರೂರದ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಜರುಗಿತು.
ಈ ವೇಳೆ ಮದುವೆಗೆ ಬಂದಿದ್ದ ಸಂಬಂಧಿಕರಿಗೆ, ಸ್ನೇಹಿತರಿಗೆ, ಗ್ರಾಮಸ್ಥರಿಗೆ ಅಂದಾಜು 700 ಸಸಿಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ವಿಶೇಷ ಪರಿಸರ ಪ್ರೀತಿ ತೋರಿದರು. ನವದಂಪತಿ ಕೊಟ್ಟ ಸಸಿಗಳಲ್ಲಿ ಮಾವು, ನಿಂಬೆ, ನುಗ್ಗೆ, ಪೇರಲ ಸೇರಿದ್ದವು.
Last Updated : Jun 15, 2020, 6:05 PM IST