ವಿಜಯಪುರ: ಕಾರ್ಮಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ ಹಾಗೂ ಕಾರ್ಮಿಕ ಕಾಯ್ದೆಗಳನ್ನು ಅಮಾನತಿನಲ್ಲಿಡುವ, ದುರ್ಬಲಗೊಳಿಸುವ ಕ್ರಮಗಳನ್ನ ಕೈ ಬಿಡುವಂತೆ ಒತ್ತಾಯಿಸಿ ಎಐಯುಟಿಯುಸಿ (ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ) ಸಂಘಟನೆಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಕಾರ್ಮಿಕ ಕಾಯ್ದೆ ದುರ್ಬಲಗೊಳಿಸುವ ಕ್ರಮ ಕೈ ಬಿಡಿ: ಡಿಸಿಗೆ ಎಐಯುಟಿಯುಸಿ ಮನವಿ - ದುಡಿಮೆ ಹೆಚ್ಚಿಸಿ ಕಾರ್ಮಿಕ ವೇತನ ಕಡಿಮೆ ಮಾಡುವ ಹುನ್ನಾರ
ಕೇಂದ್ರ ಹಾಗೂ ವಿವಿಧ ರಾಜ್ಯ ಸರ್ಕಾರಗಳು ಮೂರು ವರ್ಷಗಳ ಕಾಲ ಕಾರ್ಮಿಕ ಕಾಯ್ದೆಗಳನ್ನ ದುರ್ಬಲಗೊಳಿಸುವ ಹಾಗೂ ದುಡಿಮೆ ಹೆಚ್ಚಿಸಿ ಕಾರ್ಮಿಕ ವೇತನ ಕಡಿಮೆ ಮಾಡುವ ಹುನ್ನಾರಕ್ಕೆ ಮುಂದಾಗಿವೆ ಎಂದು ಕಾರ್ಮಿಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಎಐಯುಟಿಯುಸಿ ಕಾರ್ಯಕರ್ತರಿಂದ ಜಿಲ್ಲಾಧಿಕಾರಿಗಳಿಗೆ ಮನವಿ..
ಎಐಯುಟಿಯುಸಿ ಕಾರ್ಯಕರ್ತರಿಂದ ಜಿಲ್ಲಾಧಿಕಾರಿಗಳಿಗೆ ಮನವಿ
ಅಲ್ಲದೇ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಲು ಸೂಕ್ತ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲು ಸರ್ಕಾರ ಮುಂದಾಗುವಂತೆ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ಜಿಲ್ಲಾ ಘಟಕದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮನವಿ ಫಲಕ ಹಿಡಿದು ಅಧಿಕಾರಿಗಳ ಗಮನ ಸೆಳೆದರು.
ಸರ್ಕಾರ ಸಂಘಟಿತ ಹಾಗೂ ಸಂಘಟಿತವಲ್ಲದ ಕಾರ್ಮಿಕರಿಗೆ ವಿಶೇಷ ಯೋಜನೆಗಳನ್ನ ರೂಪಿಸಿ, ಕಾರ್ಮಿಕ ಸೇವಾ ಭತ್ಯೆಗಳನ್ನ ಸರ್ಕಾರ ನೀಡಲು ಮುಂದಾಗಬೇಕು ಹಾಗೂ ವಲಸೆ ಕಾರ್ಮಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಿ ಎಂದು ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.