ಕರ್ನಾಟಕ

karnataka

ETV Bharat / state

ಮೋದಿ ಅಧಿಕಾರಕ್ಕೆ ಬರಲ್ಲ.... ಎನ್​ಡಿಎ-ಯುಪಿಎಯೇತರ ಸರ್ಕಾರ ರಚನೆ: ದೇವೇಗೌಡ - undefined

ದೇಶದಲ್ಲಿ ಎನ್​ಡಿಎ ಹಾಗೂ ಯುಪಿಎ ಹೊರತು ಪಡಿಸಿ ಬೇರೆ ಸರ್ಕಾರ ಅಸ್ವಿತ್ವಕ್ಕೆ ಬರುತ್ತದೆ ಎನ್ನುವ ಮಮತಾ ಬ್ಯಾನರ್ಜಿ ಹೇಳಿಕೆಗೆ ಮಾಜಿ ಪ್ರಧಾನಿ ದೇವೇಗೌಡರು ಸಹಮತ ವ್ಯಕ್ತಪಡಿಸಿದ್ದಾರೆ.

ದೇವೇಗೌಡರು

By

Published : Apr 20, 2019, 1:22 PM IST

ವಿಜಯಪುರ:ದೇಶದಲ್ಲಿ ಎನ್​ಡಿಎ ಹಾಗೂ ಯುಪಿಎ ಹೊರತು ಪಡಿಸಿ ಬೇರೆ ಸರ್ಕಾರ ಅಸ್ವಿತ್ವಕ್ಕೆ ಬರುತ್ತದೆ ಎನ್ನುವ ಮಮತಾ ಬ್ಯಾನರ್ಜಿ ಹೇಳಿಕೆಗೆ ಮಾಜಿ ಪ್ರಧಾನಿ ದೇವೇಗೌಡರು ಸಹಮತ ವ್ಯಕ್ತಪಡಿಸಿದ್ದಾರೆ. ತೃತೀಯ ರಂಗದಲ್ಲಿ ಪ್ರಧಾನಿ ಅಭ್ಯರ್ಥಿಗಳಿದ್ದಾರೆ. ಕೇಂದ್ರದಲ್ಲಿ ಆಡಳಿತ ಬಂದ ಮೇಲೆ ಪ್ರಧಾನಿ ಅಭ್ಯರ್ಥಿಯ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದರು.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈಯಕ್ತಿಕವಾಗಿ ರಾಹುಲ್ ಗಾಂಧಿ ಪ್ರಧಾನಿಯಾಗಬೇಕೆಂದು ಬಯಸುತ್ತೇನೆ. ಆಲಮಟ್ಟಿ‌ ಅಣೆಕಟ್ಟಿಗೆ ನನ್ನ ಅಧಿಕಾರದಲ್ಲಿ ಚಾಲನೆ ನೀಡಿದ್ದೇನೆ. ಸಾಲ ತೆಗೆದು ಕೃಷ್ಣಾ ಕಣಿವೆಯಲ್ಲಿ‌ ಕೆಲಸಗಳನ್ನು ಮಾಡಿದ್ದೇನೆ. ಆ ವೇಳೆಯಲ್ಲಿ‌ ವರ್ಷಕ್ಕೆ 1 ಸಾವಿರ ಕೋಟಿ ಹಣ ನೀಡಿದ್ದೇನೆ. ಮೋದಿ, ಮನಮೋಹನ ಸಿಂಗ್, ವಾಜಪೇಯಿ ನೀರಾವರಿ ಯೊಜನೆಗಳಿಗೆ ತಲೆ ಕೆಡಿಸಿಕೊಂಡಿಲ್ಲ. ಮೋದಿಯವರು ಏನೆನೋ ಮಾತನಾಡುತ್ತಿದ್ದಾರೆ. ಸುಮ್ಮನೆ ಬೊಂಬಡ ಹೊಡೆಯುತ್ತಿದ್ದಾರೆ ಎಂದು ಹರಿಹಾಯ್ದರು.

ವಿಜಯಪುರದಲ್ಲಿ ದೇವೇಗೌಡರ ಸುದ್ದಿಗೋಷ್ಠಿ

ನಾನು ಅವರ ಮಟ್ಟಕ್ಕೆ ಇಳಿದು ಮಾತನಾಡಲ್ಲ. ರೈತರನ್ನು ಮೋದಿಯವರು ನಿರ್ಲಕ್ಷ್ಯ ಮಾಡಿದ್ದಾರೆ. ನಾನು ಲೋಕಸಭೆ ಚುನಾವಣೆಗೆ ನಿಲ್ಲಬಾರದು ಅಂತಾ ಮಾಡಿದ್ದೆ. ಆದರೆ, ಕೆಲ ಹಿರಿಯ ಮುಖಂಡರು ನೀಡಿದ ಸಲಹೆಯಿಂದ ಮತ್ತೊಮ್ಮೆ ಚುನಾವಣೆಗೆ ನಿಲ್ಲಬೇಕಾಯಿತು. ನಾನು ಉತ್ತರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಿಲ್ಲ. ಆಲಮಟ್ಟಿ‌ ಅಣೆಕಟ್ಟುಗೆ ಕೇಂದ್ರ ಸರ್ಕಾರ ಹಣ ನೀಡಬೇಕು ಎಂದರು.

ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು, ಶರದ ಪವಾರ್, ಮಾಯಾವತಿ ಸಹ ಪ್ರಧಾನಿ ಆಗಲು ಅರ್ಹತೆ ಹೊಂದಿದ್ದಾರೆ. ಸಿದ್ದರಾಮಯ್ಯ ಅವರ ಸಿಎಂ ಹೇಳಿಕೆ ಬಗ್ಗೆ ನಾನು ಮಾತನಾಡಲ್ಲ ಎಂದು ಹೇಳಿದರು.

For All Latest Updates

TAGGED:

ABOUT THE AUTHOR

...view details