ವಿಜಯಪುರ: ಮುಂಬೈನಲ್ಲಿರುವ ಅಂಬೇಡ್ಕರ್ ರಾಜಗೃಹ ನಿವಾಸ ಧ್ವಂಸ ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಡಿಎಸ್ಎಸ್) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ರಾಜಗೃಹ ನಿವಾಸ ಧ್ವಂಸ ಖಂಡಿಸಿ ಡಿಎಸ್ಎಸ್ನಿಂದ ಪ್ರತಿಭಟನೆ
ರಾಜಗೃಹ ನಿವಾಸ ಮೇಲೆ ಧ್ವಂಸ ಕೃತ್ಯದಲ್ಲಿ ಕಾಣದ ಕೈಗಳು ಕೆಲಸ ಮಾಡಿವೆ. ನಿವಾಸದಲ್ಲಿ ಸಿಸಿ ಕ್ಯಾಮೆರಾ ಒಡೆದು ಹಾಕಿ ದ್ವಂಸ ಮಾಡಿಲಾಗಿದೆ. ಇದು ಸಂವಿಧಾನ ರಚನಾಕಾರರಿಗೆ ಮಾಡಿದ ಅವಮಾನ..
ಅಂಬೇಡ್ಕರ್ ರಾಜಗೃಹ ನಿವಾಸ ಧ್ವಂಸ ಖಂಡಿಸಿ ಡಿಎಸ್ಎಸ್ನಿಂದ ಪ್ರತಿಭಟನೆ
ಕೃತ್ಯದಲ್ಲಿ ಭಾಗಿಯಾದವರನ್ನ ಎರಡು ದಿನಗಳ ಒಳಗೆ ಮಹಾರಾಷ್ಟ್ರ ಸರ್ಕಾರ ಪತ್ತೆ ಹಚ್ಚಲು ಮುಂದಾಗಬೇಕು. ಕಾಣದ ಕೈಗಳಿಗೆ ತಕ್ಕ ಪಾಠ ಕಲಿಸುವಂತೆ ಒತ್ತಾಯಿಸಿ ಡಿಎಸ್ಎಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.