ಕರ್ನಾಟಕ

karnataka

ರೈತರ ಕಬ್ಬಿನ ಬಾಕಿ ಹಣ ಏಪ್ರಿಲ್​ 7 ರೊಳಗೆ ಪಾವತಿಸಲು ಡಿಸಿ ಸೂಚನೆ

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿರುವ ಎಂಟು ಮಂದಿ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಶೇ.80 ರಷ್ಟುಕ್ಕಿಂತ ಕಡಿಮೆ ಹಣವನ್ನು ರೈತರಿಗೆ ಪಾವತಿಸಿರುವ ಸಕ್ಕರೆ ಕಾರ್ಖಾನೆಯವರು ಬರುವ ಏ. 7ರೊಳಗೆ ಬಾಕಿ ಉಳಿಸಿಕೊಂಡಿರುವ ಕಬ್ಬಿನ ಬಿಲ್‍ನ್ನು ತಪ್ಪದೇ ಪಾವತಿಸುವಂತೆ ಸೂಚಿಸಿದರು.

By

Published : Mar 25, 2021, 10:51 PM IST

Published : Mar 25, 2021, 10:51 PM IST

ಡಿಸಿ ಸೂಚನೆ
ಡಿಸಿ ಸೂಚನೆ

ವಿಜಯಪುರ: 2020-21ನೇ ಸಾಲಿಗೆ ಜಿಲ್ಲೆಯಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಪೂರೈಸಿದ ಕಬ್ಬಿಗೆ ಸಂಬಂಧಿಸಿದಂತೆ ರೈತರ ಖಾತೆಗೆ ಬಾಕಿ ಉಳಿದ ಹಣ ಪಾವತಿಸುವಂತೆ ಜಿಲ್ಲಾಧಿಕಾರಿ ಪಿ. ಸುನೀಲ್​ ಕುಮಾರ್​ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿರುವ ಎಂಟು ಜನ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಶೇ.80 ಕ್ಕಿಂತ ಕಡಿಮೆ ಹಣವನ್ನು ರೈತರಿಗೆ ಪಾವತಿಸಿರುವ ಸಕ್ಕರೆ ಕಾರ್ಖಾನೆಯವರು ಬರುವ ಏ. 7ರೊಳಗೆ ಬಾಕಿ ಉಳಿಸಿಕೊಂಡಿರುವ ಕಬ್ಬಿನ ಬಿಲ್‍ ಅನ್ನು ತಪ್ಪದೇ ಪಾವತಿಸುವಂತೆ ತಿಳಿಸಿದರು.

ಮಲಘಾಣದ ಮನಾಲಿ ಶುಗರ್ಸ್ ಶೇ.100 ರಷ್ಟು ಪಾವತಿಸಿದ್ದಾರೆ. ಕಾರಜೋಳದ ಬಸವೇಶ್ವರ ಶುಗರ್ಸ್ ಶೇ. 62.40 ರಷ್ಟು ಪಾವತಿಸಿದ್ದು, 6,560 ಲಕ್ಷ ರೂ. ಬಾಕಿ ಇದೆ. ಯರಗಲ್ ಬಾಲಾಜಿ ಶುಗರ್ಸ್ ಆ್ಯಂಡ್ ಕೆಮಿಕಲ್ ಪ್ರೈ.ಲಿನವರು ಶೇ. 81.87 ರಷ್ಟು ಪಾವತಿಸಿದ್ದು, 3,700.21 ಲಕ್ಷ ರೂ. ಬಾಕಿ ಇದೆ. ಮರಗೂರದ ಭೀಮಾಶಂಕರ ಕೋ.ಆಪ್ ಶುಗರ್ಸ್ ಫ್ಯಾಕ್ಟರಿ ಶೇ.30.94 ರಷ್ಟು ಪಾವತಿಸಿದ್ದು, 80.92 ಲಕ್ಷ ರೂ. ಬಾಕಿ ಇದೆ ಎಂದು ಹೇಳಿದರು.

ನಾದ ಕೆಡಿಯ ಜಮಖಂಡಿ ಶುಗರ್ಸ್ ಲಿ. ಯುನಿಟ್-2 ಶೇ. 80.74 ರಷ್ಟು ಪಾವತಿಸಿದ್ದು, 2476.85 ಲಕ್ಷ ರೂ. ಬಾಕಿ ಇದೆ. ಆಲಮೇಲದ ಕೆಪಿಆರ್ ಶುಗರ್ಸ್ ಮಿಲ್ಸ್ ಪ್ರೈ.ಲಿ ಶೇ. 96.75 ರಷ್ಟು ಪಾವತಿಸಿದ್ದು, 1,003.59 ಲಕ್ಷ ರೂ. ಬಾಕಿ ಇದೆ. ಹಾವಿನಾಳದ ಇಂಡಿಯನ್ ಶುಗರ್ ಮ್ಯಾನುಫೆಕ್ಚರ್ ಕೋ.ಲಿ ಶೇ. 60.10 ರಷ್ಟು ಪಾವತಿಸಿದ್ದು, 3,346.88 ಲಕ್ಷ ರೂ. ಬಾಕಿ ಇದೆ. ಗಲಗಲಿಯ ನಂದಿ ಎಸ್‍ಎಸ್‍ಕೆ ಲಿ. ಶೇ. 85.03 ರಷ್ಟು ಪಾವತಿಸಿದ್ದು, 3259.38 ಲಕ್ಷ ರೂ. ಬಾಕಿ ಇದೆ ಎಂದು ತಿಳಿಸಿದರು.

ABOUT THE AUTHOR

...view details