ಕರ್ನಾಟಕ

karnataka

By

Published : Dec 31, 2020, 10:55 AM IST

ETV Bharat / state

ಫುಟ್​ಪಾತ್ ಅತಿಕ್ರಮಿಸಿ, ಬಸ್​ ನಿಲ್ದಾಣದ ಅಂದಗೆಡಿಸಿದ್ದ ಗೂಡಂಗಡಿಗಳ ತೆರವು

ಮುದ್ದೇಬಿಹಾಳ ಪಟ್ಟಣದ ಬಸ್ ನಿಲ್ದಾಣದ ಮುಂಭಾಗ ಅತಿ ಕಿರಿದಾದ ಫುಟ್​ಪಾತ್ ನಲ್ಲೇ ಹಾಕಿಕೊಂಡಿದ್ದ ಗೂಡಂಗಡಿಗಳು ಬಸ್ ನಿಲ್ದಾಣದ ಅಂದ ಕೆಡಿಸಿದ್ದವು. ಇವುಗಳಿಂದಾಗಿ ಪಾದಚಾರಿಗಳಿಗೂ ಓಡಾಡಲು ಜಾಗವಿರಲಿಲ್ಲ. ಈ ಹಿನ್ನಲೆಯಲ್ಲಿ ಇಂದು ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ ನೇತೃತ್ವದಲ್ಲಿ ಜೆಸಿಬಿ ಮೂಲಕ ಗೂಡಂಗಡಿಗಳನ್ನು ತೆರವುಗೊಳಿಸಲಾಯಿತು.

Clearance of small shops on footpath near Muddebihala bustand
ಫುಟ್​ಪಾತ್ ಅತಿಕ್ರಮಿಸಿ, ಬಸ್​ ನಿಲ್ದಾಣದ ಅಂದಗೆಡಿಸಿದ್ದ ಗೂಡಂಗಡಿಗಳ ತೆರವು...

ಮುದ್ದೇಬಿಹಾಳ:ಪಟ್ಟಣದ ಬಸ್ ನಿಲ್ದಾಣದ ಎದುರಿಗಿರುವ ಫುಟ್​ಪಾತ್ ಅತಿಕ್ರಮಿಸಿದ್ದ ಗೂಡಂಗಡಿಗಳನ್ನು ಪುರಸಭೆ ಅಧಿಕಾರಿಗಳು ಜೆಸಿಬಿ ಮೂಲಕ ತೆರವುಗೊಳಿಸಿದರು.

ಫುಟ್​ಪಾತ್ ಅತಿಕ್ರಮಿಸಿ, ಬಸ್​ ನಿಲ್ದಾಣದ ಅಂದಗೆಡಿಸಿದ್ದ ಗೂಡಂಗಡಿಗಳ ತೆರವು

ತೆರವು ಕಾರ್ಯಾಚರಣೆ ವೇಳೆ ಕೆಲವು ವ್ಯಾಪಾರಿಗಳು ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ಮುಂಚಿತವಾಗಿ ಸೂಚನೆ ನೀಡಿದ್ದಿದ್ದರೆ ನಾವೇ ಅಂಗಡಿಗಳನ್ನು ತೆರವು ಮಾಡಿಕೊಳ್ಳುತ್ತಿದ್ದೆವು. ಈ ರೀತಿ ದಿಢೀರ್ ಬಂದು ನಮ್ಮ ಬದುಕಿಗೆ ಆಸರೆಯಾಗಿರುವ ಅಂಗಡಿಗಳನ್ನು ಏಕಾಏಕಿ ಕಿತ್ತೆಸೆದರೆ ಆಗುವ ನಷ್ಟವನ್ನು ಯಾರು ತುಂಬಿ ಕೊಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಾಧಿಕಾರಿ ಗೋಪಾಲ ಕಾಸೆ, ನಾವು ಬೀದಿ ಬದಿ ಕುಳಿತು ಸಣ್ಣ ಡಬ್ಬಗಳಲ್ಲಿ ಹಣ್ಣು, ಕಾಯಿ, ಹೂ ಮಾರಾಟ ಮಾಡಲು ಅವಕಾಶ ಕಲ್ಪಿಸಿದ್ದೇವೆ. ಆದರೆ, ಇಡೀ ಫುಟ್​ಪಾತ್ ಅತಿಕ್ರಮಿಸಿ ಬಸ್ ನಿಲ್ದಾಣವೇ ಕಾಣದಂತೆ ಮಾಡಿರುವುದು ತಪ್ಪು. ಇದರಿಂದ ಬಸ್​ ನಿಲ್ದಾಣದ ಅಂದವೂ ಹಾಳು, ಪಾದಚಾರಿಗಳಿಗೂ ನಡೆದಾಡಲು ಸಮಸ್ಯೆ. ಹೀಗಾಗಿ ಅತಿಕ್ರಮಣ ಮಾಡಿದ ಜಾಗವನ್ನು ತೆರವು ಮಾಡಿದ್ದೇವೆ. ಮುಂದೆಯೂ ಇದು ಹೀಗೆಯೇ ಮುಂದುವರೆದರೆ ಕ್ರಮ ಅನಿವಾರ್ಯವಾಗುತ್ತದೆ ಎಂದು ಹೇಳಿದರು.

ABOUT THE AUTHOR

...view details