ಕರ್ನಾಟಕ

karnataka

ETV Bharat / state

ಶತ್ರು ಸಂಹಾರ ಪೂಜೆಯಲ್ಲ, ಚಂಡಿಕಾ ಹೋಮ: ಭಾಗಪ್ಪ ಹರಿಜನ ಬೆಂಬಲಿಗನ ಸ್ಪಷ್ಟನೆ - Bhagappa Harijan

ಭೀಮಾ ತೀರದ ಹಂತಕ ಭಾಗಪ್ಪ ಹರಿಜನ ಜನರ ಒಳಿತಿಗಾಗಿ ದೇವಸ್ಥಾನದಲ್ಲಿ ಚಂಡಿಕಾ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದು ಶತ್ರು ಸಂಹಾರದ ಪೂಜೆಯಲ್ಲ ಎಂದು ಆತನ ಬೆಂಬಲಿಗರು ಸ್ಪಷ್ಟಪಡಿಸಿದ್ದಾರೆ.

Clarification of Bhagappa Harijan's supporter
ಭಾಗಪ್ಪ ಹರಿಜನ ಬೆಂಬಲಿಗನ ಸ್ಪಷ್ಟನೆ

By

Published : Jan 3, 2021, 3:57 PM IST

ವಿಜಯಪುರ: ಭೀಮಾತೀರದ ಹಂತಕ‌ ಭಾಗಪ್ಪ ಹರಿಜನ ತನ್ನ ಜನರ ಒಳಿತಿಗಾಗಿ ದೇವಸ್ಥಾನದಲ್ಲಿ ಚಂಡಿಕಾ ವಿಶೇಷ ಪೂಜೆ ಸಲ್ಲಿಸಿರುವುದಾಗಿ ಆತನ ಬೆಂಬಲಿಗರು ಸ್ಪಷ್ಟಪಡಿಸಿದ್ದಾರೆ.

ಭಾಗಪ್ಪ ಹರಿಜನ ಮನೆ ದೇವರಾದ ಮಹಾರಾಷ್ಟ್ರ ರಾಜ್ಯದ ಸೋಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನ ಎಲ್ಲಮ್ಮನ ಬಬಲಾದದ ಎಲ್ಲಮ್ಮದೇವಿ ಗ್ರಾಮದೇವಿ ದೇಗುಲದಲ್ಲಿ ಭಾಗಪ್ಪ ಹರಿಜನ ನಡೆಸಿರುವ ಪೂಜೆ ಶತ್ರು ಸಂಹಾರದ ಪೂಜೆ ಅಲ್ಲ, ಜನರ ಒಳಿತಿಗಾಗಿ ಪೂಜೆ ಮಾಡಿದ್ದಾರೆ ಎಂದು ಅವರ ಬೆಂಬಲಿಗ ಪ್ರಭು ರತ್ನಾಕರ ಎಂಬುವರು ದೂರವಾಣಿ ಮೂಲಕ ಸ್ಪಷ್ಟ ಪಡಿಸಿದ್ದಾರೆ.

ಓದಿ:ಶತ್ರು ಸಂಹಾರಕ್ಕಾಗಿ ತಲ್ವಾರ ಹಿಡಿದು ಪೂಜೆಗೈದ ಭೀಮಾತೀರದ ಹಂತಕ‌ ಬಾಗಪ್ಪ.. ವಿಡಿಯೋ ವೈರಲ್

ಭಾಗಪ್ಪ ಹರಿಜನ ಜೈಲಿನಲ್ಲಿದ್ದಾಗ ಮನೆ ದೇವರ ದೇವಸ್ಥಾನ ಮುಳುಗಡೆಯಾಗಿತ್ತು. ಆ ಭಾಗದಲ್ಲಿ ಜನರು ತೊಂದರೆ ಅನುಭವಿಸಿದ್ದರು. ಹೀಗಾಗಿ ಜನರ ಒಳಿತಿಗಾಗಿ ಚಂಡಿಕಾ ಹೋಮ ನಡೆಸಿದ್ದಾರೆಯೇ ಹೊರತು ಅದು ಯಾವುದೇ ಶತ್ರು ಸಂಹಾರದ ಪೂಜೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಭೀಮಾ ತೀರದ ಭಾಗಪ್ಪ ಹರಿಜನ ಕೈಯಲ್ಲಿ ತಲವಾರ್ ಹಿಡಿದು ಶತ್ರು ಸಂಹಾರ ಪೂಜೆ ನಡೆಸಿದ್ದಾನೆಂಬ ವಿಡಿಯೋ ವೈರಲ್ ಆಗಿ ಭಾರಿ ಸಂಚಲನ ಮೂಡಿಸಿತ್ತು.

ABOUT THE AUTHOR

...view details