ಕರ್ನಾಟಕ

karnataka

By

Published : Dec 17, 2022, 7:21 AM IST

ETV Bharat / state

ಭಾರತೀಯ ರಿಸರ್ವ್ ಬೆಟಾಲಿಯನ್​ ಮುಖ್ಯ ಕಾನ್ಸ್​ಟೇಬಲ್ ನಿಧನ.. ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ

ಭಾರತೀಯ ರಿಸರ್ವ್ ಬೆಟಾಲಿಯನ್​ ಮುಖ್ಯ ಕಾನ್ಸ್​ಟೇಬಲ್ ಆಗಿ ವಿಜಯಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುರೇಶ ರೋಹಿದಾಸ್​ ಕೊಡತೆ ಅವರು ಮೃತಪಟ್ಟಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ನಿನ್ನೆ ಅಂತ್ಯಕ್ರಿಯೆ ನೇರವೇರಿಸಲಾಯಿತು.

chief constable of indian reserve battalion dies
ಭಾರತೀಯ ರಿಸರ್ವ್ ಬೆಟಾಲಿಯನ್​ ಮುಖ್ಯ ಕಾನ್ಸ್​ಟೇಬಲ್ ನಿಧನ

ಸಕಲ ಗೌರವಗಳೊಂದಿಗೆ ನೆರವೇರಿದ ಮುಖ್ಯ ಕಾನ್ಸ್​ಟೇಬಲ್ ಅಂತ್ಯಕ್ರಿಯೆ

ವಿಜಯಪುರ: ಭಾರತೀಯ ರಿಸರ್ವ್ ಬೆಟಾಲಿಯನ್​ನ ಮುಖ್ಯ ಕಾನ್ಸ್​ಟೇಬಲ್​ ಆಗಿ ವಿಜಯಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುರೇಶ ರೋಹಿದಾಸ್ ಕೊಡತೆ (38) ಅವರು ಜಾಂಡೀಸ್​ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ಸುರೇಶ ಕೊಡತೆ ಅವರು ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಧೂಳಖೇಡ ಗ್ರಾಮದವರಾಗಿದ್ದು, 2008 ರಿಂದ ಭಾರತೀಯ ರಿಸರ್ವ್ ಬೆಟಾಲಿಯನ್​ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸ್ವಗ್ರಾಮ ಧೂಳಖೇಡದಲ್ಲಿ ಶುಕ್ರವಾರ ಐ.ಆರ್.ಬಿ ವಿಜಯಪುರ ಹಾಗೂ ಝಳಕಿ ಪೊಲೀಸ್ ಠಾಣೆ ವತಿಯಿಂದ ಅಗಲಿದ ಮುಖ್ಯಕಾನ್ಸ್​ಟೇಬಲ್​ಗೆ ಸಕಲ ಸರ್ಕಾರಿ ಗೌರವ ವಂದನೆ ಸಲ್ಲಿಸಿ, ವಿಧಿ-ವಿಧಾನಗಳೊಂದಿಗೆ ರುದ್ರುಭೂಮಿಯಲ್ಲಿ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ನೇರವೇರಿಸಿದರು.

ಇದನ್ನೂ ಓದಿ:ವಾಹನ ತಪಾಸಣೆ ವೇಳೆ ಟಿಪ್ಪರ್ ಪಲ್ಟಿ: ಮರಳಿನಡಿ ಸಿಲುಕಿ ಹೆಡ್ ಕಾನ್ಸ್​ಟೇಬಲ್​ ಸಾವು

ABOUT THE AUTHOR

...view details