ಕರ್ನಾಟಕ

karnataka

By

Published : Jun 6, 2022, 4:43 PM IST

ETV Bharat / state

ಕೌಟುಂಬಿಕ ಕಲಹ : ಸಿಂದಗಿಯಲ್ಲಿ ಅಕ್ಕ, ತಮ್ಮನ ಬರ್ಬರ ಹತ್ಯೆ

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಅಕ್ಕ ಹಾಗೂ ತಮ್ಮನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ..

brother-and-sister-murder-in-sindagi-of-vijayapura-district
ಕೌಟುಂಬಿಕ ಕಲಹ: ಸಿಂದಗಿಯಲ್ಲಿ ಅಕ್ಕ, ತಮ್ಮನ ಬರ್ಬರ ಹತ್ಯೆ

ವಿಜಯಪುರ :ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಅಕ್ಕ ಹಾಗೂ ತಮ್ಮನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ನಡೆದಿದೆ. ನಾನಾಗೌಡ ಯರಗಲ್ಲ (40) ಹಾಗೂ ರಾಜಶ್ರೀ ಯರಗಲ್ಲ (45) ಕೊಲೆಗೀಡಾದವರು.

ಕೊಲೆಯಾದ ಅಕ್ಕ, ತಮ್ಮ

ರಾಜಶ್ರೀ ಪತಿ ಶಂಕರಲಿಂಗ ಬಿರಾದಾರ ಎಂಬಾತನೆ ಹತ್ಯೆಗೈದಿರುವ ಆರೋಪಿ. ಕೌಟುಂಬಿಕ ಕಲಹದಿಂದಲೇ ಆರೋಪಿಯು ಇಬ್ಬರ ಹತ್ಯೆಗೈದು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಸಿಂದಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಬಗ್ಗೆ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಅಸ್ವಾಭಾವಿಕ ಲೈಂಗಿಕ ಕ್ರಿಯೆ, ಪರ ಪುರುಷನೊಂದಿಗೆ ಮಲಗುವಂತೆ ಒತ್ತಾಯ: ಪೊಲೀಸರ​ ಮೊರೆ ಹೋದ ಪತ್ನಿ

ABOUT THE AUTHOR

...view details