ಕರ್ನಾಟಕ

karnataka

ETV Bharat / state

ಲಾಕ್‌ಡೌನ್ ಸಮಯದಲ್ಲಿ ಮಾಧ್ಯಮದವರ ಸೇವೆ ಅಮೂಲ್ಯ: ಮಲ್ಲನಗೌಡ ಪಾಟೀಲ ಶ್ಲಾಘನೆ - BJP leader Mallanagouda Patil news

ಮುದ್ದೇಬಿಹಾಳ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರಿಗೆ ಬಿಜೆಪಿ ಮುಖಂಡ ಮಲ್ಲನಗೌಡ ಪಾಟೀಲ ದಿನಸಿ ಕಿಟ್ ವಿತರಿಸಿದರು.

BJP leader Mallanagouda Patil
ಲಾಕ್‌ಡೌನ್ ಸಮಯದಲ್ಲಿ ಮಾಧ್ಯಮದವರ ಸೇವೆ ಅಮೂಲ್ಯ:ಮಲ್ಲನಗೌಡ ಪಾಟೀಲ

By

Published : Jun 16, 2020, 11:54 PM IST

ಮುದ್ದೇಬಿಹಾಳ: ಕೋವಿಡ್-19 ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್​ಗಳಾಗಿ ಸೇವೆ ಸಲ್ಲಿಸಿದ ಮಾಧ್ಯಮದವರು ಜೀವ ಪಣಕ್ಕಿಟ್ಟು ಕಾರ್ಯನಿರ್ವಹಿಸಿರುವುದು ಶ್ಲಾಘನೀಯ ಕಾರ್ಯ ಎಂದು ಬಿಜೆಪಿ ಮುಖಂಡ ಮಲ್ಲನಗೌಡ ಪಾಟೀಲ ಹೇಳಿದರು.

ಲಾಕ್‌ಡೌನ್ ಸಮಯದಲ್ಲಿ ಮಾಧ್ಯಮದವರ ಸೇವೆ ಅಮೂಲ್ಯ:ಮಲ್ಲನಗೌಡ ಪಾಟೀಲ

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪತ್ರಕರ್ತರಿಗೆ ದಿನಸಿ ಕಿಟ್ ವಿತರಿಸಿ ಅವರು ಮಾತನಾಡಿದರು. ವಿಷಮ ಪರಿಸ್ಥಿತಿಯಲ್ಲಿ ವೈರಸ್‌ನ ಭೀತಿಯಿಲ್ಲದೇ ಸನ್ನಿವೇಶವನ್ನು ಎದುರಿಸಿದ್ದೀರಿ. ಕೊರೊನಾ ವೈರಸ್ ಪ್ರಮಾಣ ಹೆಚ್ಚುತ್ತಲೇ ಇದ್ದು ಸಾಮಾಜಿಕವಾಗಿ ಎಚ್ಚರಿಕೆಯಿಂದ ಜನರು ಇರಬೇಕಿದೆ ಎಂದರು.

ಕೊರೊನಾ ವೈರಸ್ ಬಗ್ಗೆ ಹಗುರವಾಗಿ ಕಾಣದೇ ಗಂಭೀರವಾಗಿ ಪರಿಗಣಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡು ಕೊರೊನಾ ವೈರಸ್ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದು ಆ ಎಲ್ಲಾ ನಾಯಕರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಕೊರೊನಾ ವೈರಸ್ ನಿಯಂತ್ರಣಕ್ಕೆ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದ್ದರಿಂದ ಸೋಂಕಿತರ ಸಂಖ್ಯೆ ಮೀತಿಯಲ್ಲಿದೆ ಎಂದರು. ಈ ಸಂದರ್ಭದಲ್ಲಿ ಭೀಮನಗೌಡ ಪಾಟೀಲ, ಅಪ್ಪುಗೌಡ ಪಾಟೀಲ, ಸಿದ್ದನಗೌಡ ಬಿರಾದಾರ ಇದ್ದರು.

ABOUT THE AUTHOR

...view details