ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ ಬೆಳಗಾವಿ ವಿಭಾಗ ಮಟ್ಟದ ಕಬಡ್ಡಿ ಪಂದ್ಯಾವಳಿ: ರಾಜ್ಯಮಟ್ಟಕ್ಕೆ 8 ತಂಡಗಳು ಆಯ್ಕೆ - ಜಿಲ್ಲಾ ದೈಹಿಕ ಶಿಕ್ಷಾಣಾಧಿಕಾರಿಗಳಾದ ಎಸ್. ಸಿ. ಗಂಗಶೆಟ್ಟಿ

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ‌ ನಿರ್ದೇಶಕ ಪ್ರಸನ್ನಕುಮಾರ್​​ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಸ್.ಸಿ.ಗಂಗಶೆಟ್ಟಿ ನೇತೃತ್ವದಲ್ಲಿ ಕಬಡ್ಡಿ ಪಂದ್ಯಾವಳಿ ನಡೆಯಿತು.‌‌ ಇನ್ನು ವಿಜಯಪುರ ಜಿಲ್ಲಾ ಅಮೇಚೂರ್​​ ಕಬಡ್ಡಿ ಅಸೋಸಿಯೇಶನ್​ನ ‌ದೈಹಿಕ ಶಿಕ್ಷಕರು‌ ಪಂದ್ಯಾವಳಿಯ ನಿರ್ಣಾಯಕತ್ವ ವಹಿಸಿಕೊಂಡಿದ್ದರು.

ಕಬಡ್ಡಿ ಪಂದ್ಯಾವಳಿ

By

Published : Oct 13, 2019, 10:41 PM IST

ವಿಜಯಪುರ: ಬೆಳಗಾವಿ ವಿಭಾಗ ಮಟ್ಟದ ಪ್ರಾಥಮಿಕ‌ ಹಾಗೂ ಪ್ರೌಢ ವಿಭಾಗದ ಕಬಡ್ಡಿ ಪಂದ್ಯಾವಳಿ ನಗರದ ಡಾ. ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯಿತು. ವಿಭಾಗ ಮಟ್ಟದಲ್ಲಿ 9 ಜಿಲ್ಲೆಗಳ ಒಟ್ಟು 36 ಬಾಲಕ ಹಾಗೂ ಬಾಲಕಿಯರ ತಂಡ ಭಾಗವಹಿಸಿದ್ದವು. ಬೆಳಿಗ್ಗೆ 10 ಗಂಟೆಯಿಂದ ಆರಂಭವಾದ ಕಬಡ್ಡಿ ಪಂದ್ಯಾವಳಿಯು ಸಂಜೆ 4 ಗಂಟೆಯವರೆಗೆ ನಡೆಯಿತು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ‌ನಿರ್ದೇಶಕ ಪ್ರಸನ್ನಕುಮಾರ‌ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ದೈಹಿಕ ಶಿಕ್ಷಾಣಾಧಿಕಾರಿ ಎಸ್.ಸಿ.ಗಂಗಶೆಟ್ಟಿ ನೇತೃತ್ವದಲ್ಲಿ ಕಬಡ್ಡಿ ಪಂದ್ಯಾವಳಿ ನಡೆಯಿತು.‌‌ ಇನ್ನು ವಿಜಯಪುರ ಜಿಲ್ಲಾ ಅಮೇಚೂರ್​​ ಕಬಡ್ಡಿ ಅಸೋಸಿಯೇಶನ್​ನ ‌ದೈಹಿಕ ಶಿಕ್ಷಕರು‌ ಪಂದ್ಯಾವಳಿಯ ನಿರ್ಣಾಯಕತ್ವ ವಹಿಸಿಕೊಂಡಿದ್ದರು.

ಬೆಳಗಾವಿ ವಿಭಾಗ ಮಟ್ಟದ ಕಬಡ್ಡಿ ಪಂದ್ಯಾವಳಿ

ಪ್ರಾಥಮಿಕ‌ ಶಾಲಾ ವಿಭಾಗದಲ್ಲಿ ಬಾಲಕರ 9 ತಂಡಗಳು‌ ಭಾಗವಹಿಸಿದ್ದವು. ಇದರಲ್ಲಿ ಚಿಕ್ಕೋಡಿ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ಬೆಳಗಾವಿ ಜಿಲ್ಲೆಗೆ ದ್ವಿತೀಯ ಸ್ಥಾನ ಲಭಿಸಿತು. ಹಾಗೆಯೇ ಪ್ರಾಥಮಿಕ‌ ಶಾಲಾ ಬಾಲಕಿಯರ ವಿಭಾಗದಲ್ಲಿ ಚಿಕ್ಕೋಡಿ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ವಿಜಯಪುರ ಜಿಲ್ಲೆಗೆ ದ್ವೀತಿಯ ಸ್ಥಾನ ದೊರೆಯಿತು.

ಪ್ರೌಢ ಶಾಲಾ ವಿಭಾಗದಲ್ಲಿ ಬಾಲಕರ ತಂಡದಲ್ಲಿ ವಿಜಯಪುರ ಜಿಲ್ಲೆಗೆ ಪ್ರಥಮ‌ ಹಾಗೂ ಬೆಳಗಾವಿ‌ ಜಿಲ್ಲೆಗೆ ದ್ವೀತಿಯ ಸ್ಥಾನ ದೊರೆಯಿತು. ಬಾಲಕಿಯರ ವಿಭಾಗದಲ್ಲಿ ಬಾಗಲಕೋಟ ಜಿಲ್ಲೆಗೆ ಪ್ರಥಮ‌ ಸ್ಥಾನ ಹಾಗೂ ಚಿಕ್ಕೋಡಿ ಜಿಲ್ಲೆಗೆ ದ್ವಿತೀಯ ಸ್ಥಾನ ದೊರೆತು, ಪ್ರಾಥಮಿಕ ‌ಹಾಗೂ ಪ್ರೌಢ ವಿಭಾಗಗಳಿಂದ ಒಟ್ಟು 8 ತಂಡಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾದವು.

ABOUT THE AUTHOR

...view details