ಕರ್ನಾಟಕ

karnataka

ETV Bharat / state

ಕೋವಿಡ್​ನಿಂದ ಮೃತಪಟ್ಟವರ ಶವಗಳನ್ನು ಚಾಲುಕ್ಯನಗರ ಸ್ಮಶಾನದಲ್ಲಿ ಹೂಳದಂತೆ ಡಿಸಿಗೆ ಮನವಿ

ಚಾಲುಕ್ಯನಗರದ ಸ್ಮಶಾನದ ಸುತ್ತಲೂ ಮನೆಗಳಿದ್ದು, ಪ್ರತಿ ದಿನವೂ ಸ್ಮಶಾನದ ಮುಂಭಾಗದಲ್ಲಿ ಜನರು ಓಡಾಡುತ್ತಾರೆ. ಹಾಗಾಗಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಶವಗಳನ್ನು ಇಲ್ಲಿ ಹೂಳದಂತೆ ಚಾಲುಕ್ಯನಗರ ನಿವಾಸಿಗಳು ಜಿಲ್ಲಾಧಿಕಾರಿಗೆ ಮನವಿ ಮಾಡಿದರು‌.

By

Published : Jul 13, 2020, 1:58 PM IST

appeal to DC
ಚಾಲುಕ್ಯ ನಗರ ನಿವಾಸಿಗಳಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ವಿಜಯಪುರ: ಕೋವಿಡ್ ಸೋಂಕಿನಿಂದ ಮೃತಪಟ್ಟವರ ಶವಗಳನ್ನ ಚಾಲುಕ್ಯನಗರದ ಸ್ಮಶಾನದಲ್ಲಿ ಹೂಳದಂತೆ ನಗರ ನಿವಾಸಗಳು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು‌.

ಸ್ಮಶಾನದ ಸುತ್ತಲೂ ಮನೆಗಳಿದ್ದು, ಪ್ರತಿ ದಿನವೂ ಸ್ಮಶಾನದ ಮುಂಭಾಗದಲ್ಲಿ ಜನರು ಓಡಾಡುತ್ತಾರೆ. ಆದರೆ ಕೊರೊನಾಗೆ ಮೃತರಾದವರ ಶವನಗಳನ್ನ ನಡು ಊರಲ್ಲಿರುವ ರುದ್ರ ಭೂಮಿಯಲ್ಲಿ ಪಿಪಿಇ ಕಿಟ್ ಧರಸಿ ಹೂಳಲಾಗುತ್ತದೆ. ಅಲ್ಲದೆ ಬಳಸಿದ ಪಿಪಿಇ ಕಿಟ್​ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಸೆಯಲಾಗುತ್ತಿದೆ. ಹೀಗಾಗಿ ಸುತ್ತಮುತ್ತಲಿನ ಜನರಿಗೆ ಆತಂಕ ಶುರುವಾಗಿದೆ. ಅವುಗಳಿಂದ ಕೊರೊನಾ ಸೋಂಕು ಹರಡುವ ಸಾಧ್ಯತೆ ಇದೆ. ಹಾಗಾಗಿ ಅಲ್ಲಿ ಶವ ಹೂಳದಂತೆ ಚಾಲುಕ್ಯನಗರ ನಿವಾಸಿಗಳು ಜಿಲ್ಲಾಧಿಕಾರಿಗೆ ಮನವಿ ಮಾಡಿದರು‌.

ಡಿಸಿಗೆ ಮನವಿ
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಆತಂಕ ಹೆಚ್ಚಾಗುತ್ತಿದ್ದು, ಈಗಾಗಲೇ ನಗರದ ನಿವಾಸಿಗಳಲ್ಲಿ ಭಯ ಮೂಡಿದೆ. ಇತ್ತ ನಡು ಊರಲ್ಲಿರುವ ಸ್ಮಶಾನದಲ್ಲಿ ಶವಗಳನ್ನು ಮಣ್ಣು ಮಾಡದಂತೆ ಹಾಗೂ ಬಳಿಸಿದ ಪಿಪಿಇ ಕಿಟ್ ಬಿಸಾಡದಂತೆ ಚಾಲುಕ್ಯನಗರದ ನಿವಾಸಿಗಳು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ABOUT THE AUTHOR

...view details