ಕರ್ನಾಟಕ

karnataka

ಭಾರತ ಬಂದ್​ಗೆ ವಿಜಯಪುರದಲ್ಲೂ ನಾಳೆ ಭಾಗಶಃ ಬಂದ್​ಗೆ ಬೆಂಬಲ...

By

Published : Sep 27, 2020, 8:52 PM IST

ಸೋಮವಾರ ಬೆಳಗಿನಿಂದ ದಲಿತಪರ, ರೈತ, ಕಾರ್ಮಿಕ ಸಂಘಟನೆಗಳು ಸೇರಿದಂತೆ ಸುಮಾರು 15ಕ್ಕೂ ಅಧಿಕ ಸಂಘಟನೆಗಳು ರೈತ ವಿರೋಧಿ ಕಾಯ್ದೆಗಳ ವಿರುದ್ಧ ಪ್ರತಿಭಟನೆಗೆ ಬೆಂಬಲ ಸೂಚಿಸುತ್ತಿದ್ದಾರೆ.

vijayapur
ವಿಜಯಪುರ

ವಿಜಯಪುರ: ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ಸೇರಿದಂತೆ ಹಲವು ಕಾಯ್ದೆ ಮಸೂದೆ ಜಾರಿ ವಿರೋಧಿಸಿ ನಾಳೆ ವಿಜಯಪುರದಲ್ಲೂ ಕೂಡ ಬೆಂಬಲ ವ್ಯಕ್ತವಾಗಿದೆ.

ನಾಳೆ ಬೆಳಗಿನಿಂದ ದಲಿತಪರ, ರೈತ, ಕಾರ್ಮಿಕ ಸಂಘಟನೆಗಳು ಸೇರಿದಂತೆ ಸುಮಾರು 15ಕ್ಕೂ ಅಧಿಕ ಸಂಘಟನೆಗಳು ರೈತ ವಿರೋಧಿ ಕಾಯ್ದೆಗಳ ವಿರುದ್ಧ ಪ್ರತಿಭಟನೆಗೆ ಬೆಂಬಲ ಸೂಚಿಸುತ್ತಿದ್ದಾರೆ. ಸೋಮವಾರ ಹಲವು ಸಂಘಟನೆಗಳ‌ ನೇತೃತ್ವದಲ್ಲಿ ರಸ್ತೆ ತಡೆ ಕೂಡ ನಡೆಸಲಾಗುತ್ತದೆ ಎಂದು ರೈತ ಮೂಲಗಳಿಂದ ಮಾಹಿತಿ ಸಿಕ್ಕಿದೆ.

ದಲಿತ ಸಂಘಟನೆಯ ಮುಖಂಡ ಸಂಜು ಕಂಬಾಗಿ

ಕೇಂದ್ರ ಹಾಗೂ‌ ರಾಜ್ಯ ಸರ್ಕಾರ ರೈತ ವಿರೋಧಿ ನೀತಿಗಳ ಜಾರಿ ಹಿಂಪಡೆಯುವಂತೆ ಒತ್ತಾಯಿಸಿ ಗುಮ್ಮಟನಗರಿಯಲ್ಲಿ ರೈತರು ಪ್ರತಿಭಟನೆ ನಡೆಸಲಿದ್ದಾರೆ. ಇನ್ನು ದಲಿತ ಪರ ಸಂಘಟನೆಗಳಿಂದ ಅಂಬೇಡ್ಕರ್ ವೃತ್ತದಲ್ಲಿ ರೈತರ ವಿರೋಧಿ ಕಾಯ್ದೆ ಜಾರಿಯ ಪ್ರತಿಗಳನ್ನು ಸುಟ್ಟು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಿವೆ.

‌‌ನಾಳೆಯ ಹೋರಾಟದ ಕುರಿತು ಈಗಾಗಲೇ ಹಲವು ಸಂಘಟನೆಗಳ ಮುಖಂಡರು ಚರ್ಚೆ ನಡೆಸಿ ನಾಳೆ ಹೋರಾಟ ರೂಪುರೇಷೆಗಳ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ದಲಿತ ಸಂಘಟನೆಯ ಮುಖಂಡ ಸಂಜು ಕಂಬಾಗಿ ಈ ಟಿವಿ ಭಾರತಕ್ಕೆ‌ ಮಾಹಿತಿ ನೀಡಿದರು.

ABOUT THE AUTHOR

...view details