ಕರ್ನಾಟಕ

karnataka

By

Published : Mar 23, 2021, 5:03 PM IST

Updated : Mar 23, 2021, 5:08 PM IST

ETV Bharat / state

ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ : ಅಪಾರ ಪ್ರಮಾಣದ ಪೊರಕೆ ಬೆಂಕಿಗಾಹುತಿ

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..

fire at broom factory
ಪೊರಕೆ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ

ವಿಜಯಪುರ :ಪೊರಕೆ ತಯಾರಿಸುತ್ತಿದ್ದ ಕಾರ್ಖಾನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದ ಪೊರಕೆಗಳು ಬೆಂಕಿಗಾಹುತಿಯಾದ ಘಟನೆ ವಿಜಯಪುರ ನಗರದ ಕೊಂಚಿಕೊರಮ ಓಣಿಯಲ್ಲಿ ನಡೆದಿದೆ.

ಪೊರಕೆ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ

ನಗರದ ಗೋಳಗುಮ್ಮಟ ಎದುರಿಗಿರುವ ಕೊಂಚಿಕೊರಮ ಓಣಿಯ‌ ನಿವಾಸಿ ಮಳ್ಳೆಪ್ಪ ಕೊಂಚಿ ಕೊರಮ ಎಂಬುವರಿಗೆ ಸೇರಿದ ಸೆಂಧಿ ಪೊರಕೆ ಘಟಕ ಬೆಂಕಿಗೆ ಆಹುತಿಯಾಗಿದೆ. ಮಾರಾಟ ಮಾಡಲು ಸೆಂಧಿ ಪೊರಕೆ ತಯಾರಿ ಶೇಖರಿಸಿಡಲಾಗಿತ್ತು.

ಓದಿ:ಬೈಕ್​ ಸವಾರ ಸಾವು ಪ್ರಕರಣ : ಪೊಲೀಸರ ಮೇಲೆ ಹಲ್ಲೆ ಮಾಡಿದ 8 ಜನರ ಬಂಧನ

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Last Updated : Mar 23, 2021, 5:08 PM IST

ABOUT THE AUTHOR

...view details