ಕರ್ನಾಟಕ

karnataka

ಕೆಎಸ್​ಆರ್​ಟಿಸಿ ಬಸ್​ಗೆ ಡಿಕ್ಕಿ ತಪ್ಪಿಸಲು ಹೋಗಿ ಪಲ್ಟಿಯಾದ ಟ್ಯಾಂಕರ್​!

By

Published : Apr 30, 2019, 8:35 AM IST

ವಿಜಯಪುರದ ಸಿಂದಗಿ ರಸ್ತೆಯ ಮದಭಾವಿ ಕ್ರಾಸ್ ಬಳಿ ಕಬ್ಬಿನ ರಸದ ತ್ಯಾಜ್ಯ ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿದೆ. ಯಾವುದೇ ಜೀವ ಹಾನಿಯಾಗಿಲ್ಲ

ವಿಜಯಪುರ

ವಿಜಯಪುರ:ಕಬ್ಬಿನ ರಸದ ತ್ಯಾಜ್ಯ ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಪಲ್ಟಿಯಾದ ಘಟನೆ ವಿಜಯಪುರದ ಸಿಂದಗಿ ರಸ್ತೆಯ ಮದಭಾವಿ ಕ್ರಾಸ್ ಬಳಿ ನಡೆದಿದೆ.

ಟ್ಯಾಂಕರ್ ಇನ್ನೇನು ಕೆಎಸ್ಆರ್​​ಟಿಸಿ ಬಸ್​ಗೆ ಡಿಕ್ಕಿ ಹೊಡೆಯುವುದರಲ್ಲಿತ್ತು. ಇದನ್ನು ತಪ್ಪಿಸಲು ಹೋಗಿ ಕೆನಾಲ್ ಮೇಲೆ ಪಲ್ಟಿಯಾಗಿದೆ.

ವಿಜಯಪುರ

ಈ ವೇಳೆ ಟ್ಯಾಂಕರ್​​ನಲ್ಲಿದ್ದ ಕಬ್ಬಿನ ರಸದ ತ್ಯಾಜ್ಯ ನೀರು ಪಾಲಾಗಿದೆ. ಅದೃಷ್ಟವಶಾತ್​ ಘಟನೆಯಲ್ಲಿ ಯಾವುದೇ ಜೀವ ಹಾನಿಯಾಗಿಲ್ಲ.

ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

ABOUT THE AUTHOR

...view details