ವಿಜಯಪುರ : ಇಂಡಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಭಾರತಿ ಹಿಟ್ನಳ್ಳಿ, ಮದುವೆಯಾದ 15 ದಿನಗಳಲ್ಲೇ ಸೇವೆಗೆ ವಾಪಸಾಗಿ ರೋಗಿಗಳ ಮೇಲೆ ತಮಗಿರುವ ಪ್ರೀತಿ ಹಾಗೂ ಕೆಲಸದ ಮೇಲಿನ ಶ್ರದ್ಧೆ ಸಾಬೀತು ಪಡಿಸಿದ್ದಾರೆ.
ಓದಿ: ಕೋವಿಡ್ ಸಂಕಷ್ಟ ಕಾಲಕ್ಕೆ ರಿಯಲ್ ಹಿರೋಗಳಾದ ಸಿನಿ ತಾರೆಯರು: ಇವರೇ ಆ 'ಆಪತ್ಬಾಂಧವರು'
ಸೇನೆಗೆ ಮಕ್ಕಳು ಸೇರುತ್ತಾರೆಂದರೆ ಹಿಂದೆ ಪೋಷಕರು ಚಿಂತೆ ಮಾಡುತ್ತಿದ್ದರು. ಈಗಲೂ ಅಂಥದ್ದೇ ಸ್ಥಿತಿ ಎದುರಾಗಿದೆ. ಕೊರೊನಾ ಸೇನಾನಿ ಆಗಿ ಕೆಲಸ ಮಾಡುವ ಅವಕಾಶ ಲಭಿಸಿದೆ. ನೀನು ನಮ್ಮ ಸೇವೆಗಿಂತಲೂ ಕೊರೊನಾ ಪೀಡಿತರ ಸೇವೆ ಮಾಡು,
ಕಷ್ಟದಲ್ಲಿದ್ದವರ ಸೇವೆ ಮಾಡುವುದೇ ನಿಜವಾದ ಸೇವೆ ಎಂದು ಮಾವ-ಅತ್ತೆ ನನ್ನನ್ನು ಹುರಿದುಂಬಿಸಿದ್ದಾರೆ ಎಂದು ನರ್ಸ್ ಭಾರತಿ ಕುಟುಂಬದ ಪ್ರೋತ್ಸಾಹವನ್ನು ನೆನೆಯುತ್ತಾರೆ.