ಕರ್ನಾಟಕ

karnataka

By

Published : Jul 23, 2021, 1:12 PM IST

ETV Bharat / state

ಆಲಮಟ್ಟಿ ಡ್ಯಾಂನಿಂದ 1.70 ಲಕ್ಷ ಕ್ಯೂಸೆಕ್​ ನೀರು ಬಿಡುಗಡೆ..ಮಹಾರಾಷ್ಟ್ರದ ಗಡಿಯಲ್ಲಿ ಹೆಚ್ಚಿದ ಆತಂಕ!

ಆಲಮಟ್ಟಿ ಡ್ಯಾಂನ 24 ಗೇಟ್​ನಿಂದ 1.70 ಲಕ್ಷ ಕ್ಯೂಸೆಕ್​ ನೀರು ಬಿಡುಗಡೆ ಮಾಡಲಾಗಿದ್ದು, ಮಹಾರಾಷ್ಟ್ರದ ಗಡಿ ಜನತೆಯಲ್ಲಿ ಆತಂಕ ಹೆಚ್ಚಾಗಿದೆ.

1.70 lakh cusec water release, 1.70 lakh cusec water release from Almatti dam, 1.70 lakh cusec water release to Krishna river, Almatti dam, Almatti dam news, ಕೃಷ್ಣಾ ನದಿಗೆ ಹೆಚ್ಚಿದ ನೀರಿನ ಪ್ರವಾಹ, ಆಲಮಟ್ಟಿ ಡ್ಯಾಂನಿಂದ 1.70 ಲಕ್ಷ ಕ್ಯೂಸೆಕ್​ ನೀರು ಬಿಡುಗಡೆ, ಕೃಷ್ಣಾ ನದಿಗೆ 1.70 ಲಕ್ಷ ಕ್ಯೂಸೆಕ್​ ನೀರು ಬಿಡುಗಡೆ, ಆಲಮಟ್ಟಿ ಡ್ಯಾಂ, ಆಲಮಟ್ಟಿ ಡ್ಯಾಂ ಸುದ್ದಿ,
ಮಹಾರಾಷ್ಟ್ರಾದ ಗಡಿಯಲ್ಲಿ ಹೆಚ್ಚಿದ ಆತಂಕ

ವಿಜಯಪುರ: ಮಹಾರಾಷ್ಟ್ರದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನೆಲೆ ಕೃಷ್ಣಾ ನದಿಗೆ ಒಳ ಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಹೀಗಾಗಿ ಆಲಮಟ್ಟಿ ಜಲಾಶಯದ 26 ಗೇಟ್​ನಲ್ಲಿ 24 ಗೇಟ್​ಗಳ ಮೂಲಕ ನೀರು ಹೊರಬಿಡಲಾಗುತ್ತಿದೆ.

ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿಯ ಲಾಲ್ ಬಹದ್ದೂರ್ ಶಾಸ್ತ್ರೀ ಸಾಗರದ 24 ಕ್ರಸ್ಟ್ ಗೇಟ್‌ಗಳನ್ನು ಓಪನ್ ಮಾಡಲಾಗಿದ್ದು, ಯಾದಗಿರಿಯ ಬಸವ ಸಾಗರಕ್ಕೆ ನೀರು ಬಿಡಲಾಗುತ್ತಿದೆ.

ಡ್ಯಾಂ‌ಗೆ 81,202 ಕ್ಯೂಸೆಕ್ ಒಳ ಹರಿವು ಇದೆ. ಹೀಗಾಗಿ 24 ಗೇಟ್​ಗಳ ಮೂಲಕ 1,71,428 ಕ್ಯೂಸೆಕ್ ನೀರು ಹೊರ ಹರಿವು ಬಿಡಲಾಗುತ್ತಿದೆ. ಇನ್ನು ಹೊರ ಹರಿವು ಹೆಚ್ಚಳದಿಂದಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ಭಾಗದ ಜನತೆಯಲ್ಲಿ ಆತಂಕ ಹೆಚ್ಚಾಗಿದೆ.

ABOUT THE AUTHOR

...view details