ಕರ್ನಾಟಕ

karnataka

ಭಟ್ಕಳದಲ್ಲಿ ಮುಸ್ಲಿಮ್ ಅಭ್ಯರ್ಥಿ ಕಣಕ್ಕಿಳಿಸದಿದ್ದರೆ 'ನೋಟಾ'ಕ್ಕೆ ಮೊರೆ: ಮಹಿಳೆಯರಿಂದ ಎಚ್ಚರಿಕೆ

By

Published : Mar 22, 2023, 8:55 PM IST

ತಂಝೀಮ್ ಕಚೇರಿಗೆ ಬಂದ ನೂರಕ್ಕೂ ಅಧಿಕ ಮುಸ್ಲಿಮ್​ ಸಮುದಾಯದ ಮಹಿಳೆಯರು, ಭಟ್ಕಳದಲ್ಲಿ ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ಒತ್ತಾಯಿಸಿದರು.

Forced by Muslim women
ಮುಸ್ಲಿಮ್​ ಸಮುದಾಯದ ಮಹಿಳೆಯರಿಂದ ಪ್ರತಿಭಟನೆ

ಭಟ್ಕಳದಲ್ಲಿ ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ಮುಸ್ಲಿಮ್​ ಸಮುದಾಯದ ಮಹಿಳೆಯರು ಆಗ್ರಹಿಸಿದರು.

ಕಾರವಾರ (ಉತ್ತರ ಕನ್ನಡ): ಭಟ್ಕಳ ವಿಧಾನಸಭಾ ಕ್ಷೇತ್ರಕ್ಕೆ ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬೇಡಿಕೆ ಹೆಚ್ಚಾಗುತ್ತಿದ್ದು, ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ತಂಝೀಮ್ ಸಂಸ್ಥೆಯ ಕಚೇರಿಗೆ ಬಂದ ನೂರಕ್ಕೂ ಅಧಿಕ ಮಹಿಳೆಯರು, ಭಟ್ಕಳದಲ್ಲಿ ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ತಂಝೀಮ್ ತನ್ನ ನಿರ್ಣಯದಿಂದ ಹಿಂದೆ ಸರಿಯದೇ ಇದ್ದಲ್ಲಿ ಚುನಾವಣೆಯಲ್ಲಿ ತಾವು ನೋಟಾ ಮತಕ್ಕೆ ಮೊರೆಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಕುರಿತು ತಂಝೀಮ್ ಸಂಸ್ಥೆಗೆ ಮನವಿ ಸಲ್ಲಿಸಿದರು.

ಭಟ್ಕಳದಲ್ಲಿ ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಂಬಂಧ ನಡೆಯುತ್ತಿರುವ ಚರ್ಚೆ ಹಿನ್ನೆಲೆಯಲ್ಲಿ ಮಂಗಳವಾರ ಸಭೆ ನಡೆಯಿತು. ಸರ್ವ ಜಮಾಅತ್ ಪ್ರತಿನಿಧಿಗಳ ಸಭೆಯು ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸಬಾರದು ಎಂಬ ನಿರ್ಣಯ ಕೈಗೊಂಡಿತ್ತು. ಈ ನಿರ್ಣಯದ ವಿರುದ್ಧ ಹಲವು ಯುವಕರು ಸಾಮಾಜಿಕ ಜಾಲಾತಾಣದಲ್ಲಿ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ ಬುಧವಾರ ಹೊಸ ಬೆಳವಣಿಗೆಯೊಂದು ನಡೆದಿದ್ದು, ಮಹಿಳೆಯರು ಕೂಡಾ ತಮ್ಮ ಧ್ವನಿ ಎತ್ತಿದ್ದಾರೆ.

ಇದನ್ನೂ ಓದಿ:ಕಾಂಗ್ರೆಸ್ ಭದ್ರಕೋಟೆ ಬೇಧಿಸುವ ಬಿಜೆಪಿ ಕನಸು ನನಸಾಗುತ್ತಾ? ಕೈ ಅಭ್ಯರ್ಥಿ ಕುತೂಹಲ!

ಭಟ್ಕಳ ಯುತ್ ಗರ್ಲ್ಸ್ ವಿಂಗ್ ಸಂಘಟನೆಯ ಆಯಿಶಾ ತುರ್ಫಾ ಅಜಾಯಿಬ್ ಎನ್ನುವವರು ತಂಝೀಮ್ ಸಂಸ್ಥೆಗೆ ಮನವಿಯನ್ನು ಸಲ್ಲಿಸಿದ್ದು, ಮಾ.೨೦ರಂದು ತಂಝೀಮ್ ತೆಗೆದುಕೊಂಡ ನಿರ್ಣಯವನ್ನು ಕಟುವಾಗಿ ಟೀಕಿಸಲಾಗಿದೆ. ತಂಝೀಮ್ ತನ್ನ ನಿರ್ಣಯವನ್ನು ಮರುಪರಿಶೀಲಿಸುವುದರೊಂದಿಗೆ ಮುಸ್ಲಿಂ ಅಭ್ಯರ್ಥಿಯ ಪರ ನಿರ್ಣಯವನ್ನು ಕೈಗೊಳ್ಳುವಂತೆ ಆಗ್ರಹಿಸಲಾಗಿದೆ. ತಂಝೀಮ್​ನ ಕಾರ್ಯಕಾರಿ ಸಮಿತಿ ಹಾಗೂ ರಾಜಕೀಯ ಸಮಿತಿ (ಪೊಲಿಟಿಕಲ್ ಪ್ಯಾನಲ್)ಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಮನವಿ ಪತ್ರದಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ:'ಕಾಂಗ್ರೆಸ್ ಗ್ಯಾರಂಟಿ ಗಿಮಿಕ್​ಗೆ ರಾಜ್ಯದ ಮತದಾರರು ಮರುಳಾಗಲ್ಲ'

ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿಯವರ ಅನುಪಸ್ಥಿತಿಯಲ್ಲಿ ಮನವಿ ಪತ್ರ ಸ್ವೀಕರಿಸಿದ ತಂಝೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ. ಅವರು, ತಮ್ಮ ಬೇಡಿಕೆಯನ್ನು ಕಾರ್ಯಕಾರಿ ಸಭೆಯಲ್ಲಿ ಇಡುವುದಾಗಿ ತಿಳಿಸಿದರು.

ಇದನ್ನೂ ಓದಿ:ಕಾಂಗ್ರೆಸ್​ ಬಿಜೆಪಿ ನಡುವೆ ನೇರ ಪೈಪೋಟಿ, ಜೆಡಿಎಸ್​ನಿಂದಲೂ ಹೋರಾಟ.. ಯಾರಾಗ್ತಾರೆ ವಿಜಯನಗರದ ವೀರಪುತ್ರ?

60 ಸಾವಿರಕ್ಕೂ ಹೆಚ್ಚು ಮುಸ್ಲಿಮ್ ಮತದಾರರನ್ನು ಹೊಂದಿರುವ ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಇರುವುದು ವಿಪರ್ಯಾಸ. ಈವರೆಗೆ ಶಾಸಕರಾಗಿದ್ದವರೆಲ್ಲರೂ ಕೂಡಾ ನಮ್ಮ ಯಾವುದೇ ಸಮಸ್ಯೆಯನ್ನು ಆಲಿಸಿಲ್ಲ. ಹಿಜಾಬ್, ಎನ್.ಆರ್.ಸಿ, ಸಿಎಎ ವಿಷಯದಲ್ಲಿ ಅವರು ಮಾತನಾಡಿಲ್ಲ. ಕೋವಿಡ್​ನಂತಹ ಕಠಿಣ ಸ್ಥಿತಿಯಲ್ಲೂ ನಮ್ಮ ಬಗ್ಗೆ ಕಾಳಜಿ ವಹಿಸಿಲ್ಲ. ತಂಝೀಮ್ ಸಂಸ್ಥೆ ನಮಗೆ ಎಲ್ಲ ಸೌಲಭ್ಯಗಳನ್ನು ಮಾಡಿಕೊಟ್ಟಿದೆ. ಹಾಗಾಗಿ ಮುಸ್ಲಿಂ ಅಭ್ಯರ್ಥಿ ಶಾಸಕರಾದರೆ ಮುಸ್ಲಿಮ್ ಸಮುದಾಯದ ಸಮಸ್ಯೆಗಳಿಗೆ ಸ್ಪಂದನೆ ದೊರೆಯುತ್ತದೆ ಎಂದು ಮನವಿ ಪತ್ರ ನೀಡಲು ಬಂದ ಮುಸ್ಲಿಮ್​ ಸಮುದಾಯದ ಮಹಿಳೆಯೊಬ್ಬರು ಮಾಧ್ಯಮಗಳಿಗೆ ತಿಳಿಸಿದರು.

ಇದನ್ನೂ ಓದಿ:ಕೈ ಹಿಡಿದ ಮಾಜಿ ಸಚಿವ ಬಾಬುರಾವ್ ಚಿಂಚನಸೂರು; ಮನೆಯಲ್ಲೇ ಬರಮಾಡಿಕೊಂಡ ಡಿಕೆಶಿ

ಇದನ್ನೂ ಓದಿ:ಕುಮಟಾ ಕ್ಷೇತ್ರದತ್ತ ನಿವೇದಿತ್ ಆಳ್ವಾ ಚಿತ್ತ; ಕೈ ಜಾರುವ ಆತಂಕದಲ್ಲಿ ಟಿಕೆಟ್ ಆಕಾಂಕ್ಷಿಗಳು!

ABOUT THE AUTHOR

...view details