ಕರ್ನಾಟಕ

karnataka

ETV Bharat / state

ಉತ್ತರಕನ್ನಡ : ನದಿ ಪಾತ್ರದ ಜನರಿಗೆ ಪರ್ಯಾಯವಾಗಿ ಬೇರೆಡೆ ಮನೆ ಕಟ್ಟಿಕೊಡುವಂತೆ ಶಿರೂರು ಮಂದಿ ಒತ್ತಾಯ - home for uttara kannada shirooru people

ಕೆಲವರ ಮನೆಗಳು ಸಂಪೂರ್ಣ ನೆಲಸಮವಾಗಿವೆ. ಮಾಹಿತಿ ಪಡೆದು ತೆರಳಿದ ಅಧಿಕಾರಿಗಳು ಇತ್ತ ಮುಖ ಹಾಕಿಲ್ಲ. ಹೀಗಾಗಿ, ಮನೆ ಕಳೆದುಕೊಂಡವರು ಮರಳಿ ಮನೆ ಕಟ್ಟಿಕೊಳ್ಳಲಾಗದೇ ಸಂಕಷ್ಟ ಎದುರಿಸುತ್ತಿದ್ದಾರೆ..

uttara kannada shirooru people demands to provide shelter in other place
ನದಿ ಪಾತ್ರದ ಜನರಿಗೆ ಪರ್ಯಾಯವಾಗಿ ಬೇರೆಡೆ ಮನೆ ಕಟ್ಟಿಕೊಡುವಂತೆ ಶಿರೂರು ಮಂದಿ ಒತ್ತಾಯ

By

Published : Jan 29, 2022, 12:40 PM IST

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಸೃಷ್ಟಿಯಾಗುತ್ತಿರುವ ಪ್ರವಾಹವು ನದಿ ತೀರದ ಜನರನ್ನ ಸಂಕಷ್ಟಕ್ಕೆ ಸಿಲುಕಿಸಿದೆ. ಅದರಲ್ಲಿಯೂ ಅಂಕೋಲಾ ತಾಲೂಕಿನಲ್ಲಿ ಉಕ್ಕಿ ಹರಿದ ಗಂಗಾವಳಿ ನದಿಯಿಂದಾಗಿ ಇಲ್ಲಿನ ಗ್ರಾಮಗಳು ಪ್ರತಿ ವರ್ಷವೂ ಮುಳುಗಡೆಯಾಗಿ ಸಾಕಷ್ಟು ನಷ್ಟವಾಗುತ್ತಿದೆ. ಇದೇ ರೀತಿ ಸಮಸ್ಯೆ ಎದುರಿಸುತ್ತಿರುವ ತಾಲೂಕಿನ ಬೆಳಸೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಶಿರೂರು ಗ್ರಾಮಸ್ಥರು ಇದೀಗ ಊರಿಗೆ ಊರೇ ತೊರೆಯಲು ಸಿದ್ದರಾಗಿದ್ದಾರೆ.

ಶಿರೂರು ಗ್ರಾಮದಲ್ಲಿ 2019ರಲ್ಲಿ ಮೊದಲ ಬಾರಿಗೆ ಪ್ರವಾಹ ಬಂದಾಗ ಒಂದಿಷ್ಟು ಮನೆಗಳು ನೆಲಸಮವಾಗಿತ್ತಾದರೂ ಹೇಗೋ ಅವರಿವರ ಸಹಕಾರದಲ್ಲಿ ಮನೆಗಳನ್ನು ಮರು ನಿರ್ಮಾಣ ಮಾಡಿಕೊಂಡಿದ್ದರು. ಆದರೆ, ಅದಾದ ಬಳಿಕ ಮತ್ತೆರಡು ವರ್ಷವೂ ನೆರೆ ಬಂದು ಎಲ್ಲವೂ ಕೊಚ್ಚಿ ಹೋಗಿದೆ. ಇನ್ನೇನು ಕೆಲವೇ ತಿಂಗಳಲ್ಲಿ ಮಳೆಗಾಲ ಆರಂಭವಾಗಲಿದ್ದು, ಮತ್ತದೇ ಪ್ರವಾಹ ಸೃಷ್ಟಿಯಾಗುವ ಆತಂಕ‌ ಶುರುವಾಗಿದೆ.

ನದಿ ಪಾತ್ರದ ಜನರಿಗೆ ಪರ್ಯಾಯವಾಗಿ ಬೇರೆಡೆ ಮನೆ ಕಟ್ಟಿಕೊಡುವಂತೆ ಶಿರೂರು ಮಂದಿ ಒತ್ತಾಯ..

ಹಾಗಾಗಿ, ಕೂಡಲೇ ಸರ್ಕಾರ ಮುಳುಗಡೆಯಾಗುವ ನದಿ ಪಾತ್ರದ ಮನೆಗಳಿಗೆ ಪರ್ಯಾಯವಾಗಿ ಬೇರೆಡೆ ಜಾಗ ನೀಡಿ ಮನೆ ಕಟ್ಟಿ ಕೊಡಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಶಿರೂರು ಗ್ರಾಮದಲ್ಲಿ ಸುಮಾರು 350ಕ್ಕೂ ಅಧಿಕ ಮನೆಗಳಿವೆ. ಈ ಭಾಗದ ಬಹುತೇಕರು ಕೃಷಿ, ಕೂಲಿ, ಮೀನುಗಾರಿಕೆ ಮಾಡಿ ಜೀವನ ನಡೆಸುತ್ತಿದ್ದಾರೆ. ಗಂಗಾವಳಿ ನದಿ ಜೀವನಾಧಾರಾವಾಗಿದ್ದರೂ ಕಳೆದ ಮೂರು ವರ್ಷಗಳಿಂದ ವಾರಗಳ ಕಾಲ ನದಿ ಉಕ್ಕಿ ಹರಿಯುವ ಕಾರಣ ಬಹುತೇಕರಿಗೆ ನದಿ ಪಕ್ಕದ ಜೀವನ ದುಸ್ಥರವಾಗಿ ಪರಿಣಮಿಸಿದೆ.

ಪ್ರವಾಹದಿಂದ ನೀರು ನುಗ್ಗಿದ ಮನೆಗಳಿಗೆ ತಕ್ಷಣ ಹತ್ತು ಸಾವಿರ ಪರಿಹಾರ ನೀಡುವಂತೆ ಸರ್ಕಾರ ಸೂಚನೆ ನೀಡಿತ್ತಾದರೂ ಕೆಲವರಿಗೆ ಈ ಪರಿಹಾರವೇ ಇನ್ನೂ ಕೈಸೇರಿಲ್ಲ.

ಇದನ್ನೂ ಓದಿ:ಶಾಲೆಗಳಲ್ಲಿ ಮಕ್ಕಳಿಗೆ ಸುರಕ್ಷಿತ ವಾತಾವರಣ ಸೃಷ್ಟಿಸಿ: ತಾಂತ್ರಿಕ ಸಲಹಾ ಸಮಿತಿ ಸಲಹೆ

ಕೆಲವರ ಮನೆಗಳು ಸಂಪೂರ್ಣ ನೆಲಸಮವಾಗಿವೆ. ಮಾಹಿತಿ ಪಡೆದು ತೆರಳಿದ ಅಧಿಕಾರಿಗಳು ಇತ್ತ ಮುಖ ಹಾಕಿಲ್ಲ. ಹೀಗಾಗಿ, ಮನೆ ಕಳೆದುಕೊಂಡವರು ಮರಳಿ ಮನೆ ಕಟ್ಟಿಕೊಳ್ಳಲಾಗದೇ ಸಂಕಷ್ಟ ಎದುರಿಸುತ್ತಿದ್ದಾರೆ.

ಅದೆಷ್ಟೋ ಮಂದಿ ಇದೀಗ ಪ್ಲಾಸ್ಟಿಕ್ ಹೊದಿಕೆಯ ತಾತ್ಕಾಲಿಕ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಕೂಡಲೇ ಸರ್ಕಾರ ನಿರಾಶ್ರಿತರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಗಂಗಾವಳಿ ನದಿ ಪ್ರವಾಹದಿಂದ ಸರ್ವಸ್ವವನ್ನೂ ಕಳೆದುಕೊಂಡವರಿಗೆ ಇದೀಗ ಮತ್ತೆ ಆತಂಕ ಶುರುವಾಗಿದೆ.

ABOUT THE AUTHOR

...view details